• Slide
    Slide
    Slide
    previous arrow
    next arrow
  • ನೇತ್ರ ಶಸ್ತ್ರಚಿಕಿತ್ಸೆಗೆಂದು ದಾಖಲಾದವರಿಗೆ ಹಣ್ಣು- ಹಂಪಲು ವಿತರಣೆ

    300x250 AD

    ಕುಮಟಾ: ಹಳದಿಪುರದ ಅಪ್ಪೆಕೇರಿಯ ಮಾರುತಿ ಗೌಡ ನೇತ್ರದಾನಕ್ಕೆ ನೋಂದಾಯಿಸಿಕೊಂಡು, ಕಣ್ಣುಪೊರೆ ಶಸ್ತ್ರಚಿಕಿತ್ಸೆಗೆ ದಾಖಲಾದ ಹಿರಿಯರಿಗೆ ಹಣ್ಣುಗಳನ್ನು ವಿತರಿಸುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.

    ಈ ಸಂದರ್ಭದಲ್ಲಿ ಪಾಲ್ಗೊಂಡ ಆಸ್ಪತ್ರೆಯ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಟ್ರಸ್ಟಿ ಡಾ.ಸಿ.ಎಸ್. ವೇರ್ಣೆಕರ ಮಾತನಾಡಿ ಮಾರುತಿ ಮಾಸ್ತಿ ಗೌಡ ಅವರ ಈ ಆದರ್ಶ ನಡೆಯ ಕುರಿತು ಹರ್ಷ ವ್ಯಕ್ತಪಡಿಸಿ ಟ್ರಸ್ಟ್ ವತಿಯಿಂದ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.

    300x250 AD

    ರಕ್ತದಾನಿ ಬಳಗದ ಮಂಜುನಾಥ ಗೋಳಿಬೀರ ಗೌಡ, ಅನಂತ ಗಣಪು ಗೌಡ,ದೇವೇಂದ್ರ ವಿಷ್ಣು ಗೌಡ ಹಾಗೂ ನೇತ್ರತಜ್ಙ ಡಾ.ಮಲ್ಲಿಕಾರ್ಜುನ, ಆಡಳಿತಾಧಿಕಾರಿ ಜಯದೇವ ಬಳಗಂಡಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದು ಶುಭಕೋರಿದರು.
    ಪ್ರತಿ ತಿಂಗಳಿನಂತೆ ತಿಂಗಳಿನ 3 ನೇಯ ಗುರುವಾರ ಗೋಕರ್ಣ ಮತ್ತು ಅಂಕೋಲಾದಲ್ಲಿ ನಡೆದ ಉಚಿತ ಕ್ಯಾಂಪನಲ್ಲಿ ಕಣ್ಣುಪೊರೆ ಶಸ್ತ್ರಚಿಕಿತ್ಸೆ ಅವಶ್ಯವುಳ್ಳ 17 ಅರ್ಹ ವೃದ್ಧರನ್ನು ಉಚಿತ ಶಸ್ತ್ರಚಿಕಿತ್ಸೆಗಾಗಿ ಕುಮಟಾದಲ್ಲಿನ ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿತ್ತು. ಅವರೆಗೆಲ್ಲ ಹಣ್ಣುಗಳನ್ನು ವಿತರಿಸುವ ಮೂಲಕ ಮಾರುತಿ ಮಾಸ್ತಿ ಗೌಡರು ತಮ್ಮ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.

    Share This
    300x250 AD
    300x250 AD
    300x250 AD
    Leaderboard Ad
    Back to top