• Slide
    Slide
    Slide
    previous arrow
    next arrow
  • ಆಟೋ ಚಾಲಕರಿಗೂ ಪ್ಯಾಕೇಜ್ ಘೋಷಣೆಗೆ ಉಪೇಂದ್ರ ಪೈ ಆಗ್ರಹ

    300x250 AD

    ಶಿರಸಿ: ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದ ಸರ್ಕಾರ ಜನತೆಗೆ ಅನುಕೂಲವಾಗಲೆಂದು ಹಲವು ಗ್ಯಾರಂಟಿ ಯೋಜನೆಗಳು ಜಾರಿಗೆ ತಂದಿದ್ದು, ಆ ಪೈಕಿ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಕೂಡ ಒಂದಾಗಿದೆ. ಈ ಯೋಜನೆಯಿಂದಾಗಿ ಸಾವಿರಾರು ಆಟೋ ಚಾಲಕರ ಸ್ಥಿತಿ ಏನು ಎಂದು ಶಿರಸಿ ಆಟೊ ಚಾಲಕ ಮಾಲಕರ ಸಂಘದ ಅಧ್ಯಕ್ಷ ಉಪೇಂದ್ರ ಪೈ ಪ್ರಶ್ನಿಸಿದ್ದಾರೆ.

    2020- 21ರ ಮಾರಕ ಖಾಯಿಲೆಯಾದ ಕೋರೊನಾ ಸಂದರ್ಭದ ಭಾರಿ ಹೊಡೆತದಿಂದ ಕಂಗಾಲಾದ ಆಟೋ ಚಾಲಕರು ಇನ್ನೂ ಸುಧಾರಿಕೊಳ್ಳಲಾಗಲಿಲ್ಲ. ವಾಹನದ ವಿಮೆ, ಬ್ಯಾಂಕ್ ಸಾಲ, ಮನೆ ನಿರ್ವಹಣೆ, ಮಕ್ಕಳ ವಿಧ್ಯಾಭ್ಯಾಸ, ಪರ್ಮಿಟ್ ಲೈಸೆನ್ಸ್ ಇವೆಲ್ಲವೂನ್ನು ಆಟೋ ಬಾಡಿಗೆಯಿಂದಲೆ ನಿರ್ವಹಿಸಬೇಕಾಗುತ್ತದೆ. ಅಂತಹದರಲ್ಲಿ ಸರ್ಕಾರವು ಈ ರೀತಿ ಸವಲತ್ತು ನೀಡಿದರೆ ನಮ್ಮ ಕಷ್ಟಕ್ಕೆ ಯಾರು ಹೊಣೆ? ಎಂದು ಕೇಳಿದ್ದಾರೆ. ಸರ್ಕಾರವು ಎಚ್ಚೆತ್ತು ಆಟೋ ಚಾಲಕರಿಗೆ ಆದಷ್ಟು ಬೇಗ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top