Slide
Slide
Slide
previous arrow
next arrow

ಶಿರಸಿಯಲ್ಲಿ ಬಸ್-ಬೈಕ್ ಡಿಕ್ಕಿ: ಸ್ಥಳದಲ್ಲೇ ಯುವಕನ ದುರ್ಮರಣ

300x250 AD

ಶಿರಸಿ: ನಗರದ ಸಾಮ್ರಾಟ್ ಹೊಟೆಲ್ ಎದುರುಗಡೆ ಬಸ್ ಒಂದು ಬೈಕ್ ಗೆ ಡಿಕ್ಕಿ ಹೊಡೆದು, ಬೈಕ್ ಸವಾರನ ಮೇಲೆ ಬಸ್ ಹರಿದು‌ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮಹೇಶ್ ವಡ್ಡರ್ ಎಂಬಾತನೇ ಮೃತ ದುರ್ದೈವಿಯಾಗಿದ್ದು, ಈತ ಗಣೇಶ ನಗರ ನಿವಾಸಿಯಾಗಿದ್ದ. ಸಾಮ್ರಾಟ್ ಎದುರಿನ ಇಳಿಜಾರಿನಲ್ಲಿ ಬೈಕ್’ನ (KA 31 U- 1409) ಹಿಂಬದಿಗೆ ಸುಗಮ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರಸ್ತೆಯ ಮೇಲೆ‌ ಬಿದ್ದಿದ್ದು, ಬಿದ್ದವನ ತಲೆಮೇಲೆ ಬಸ್ ಹರಿದು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಒಂದು ತಿಂಗಳ ಹಿಂದಷ್ಟೇ ಯುವಕನ ಮದುವೆಯಾಗಿತ್ತು ಎಂದು ತಿಳಿದುಬಂದಿದೆ.

300x250 AD

Share This
300x250 AD
300x250 AD
300x250 AD
Back to top