• Slide
    Slide
    Slide
    previous arrow
    next arrow
  • ಜೂ.7ಕ್ಕೆ ಜಾಗನಳ್ಳಿಯಲ್ಲಿ ‘ನಾದಪೂಜೆ’ ಕಾರ್ಯಕ್ರಮ

    300x250 AD

    ಶಿರಸಿ: ಸ್ವರ ಸಂವೇದನಾ ಪ್ರತಿಷ್ಠಾನ(ರಿ) ಗಿಳಿಗುಂಡಿ ವತಿಯಿಂದ ಸಂಕಷ್ಠಿ ಪ್ರಯುಕ್ತ  “ನಾದಪೂಜೆ” ಸಂಗೀತ ಕಾರ್ಯಕ್ರಮವನ್ನು ಜೂ.7, ಬುಧವಾರದಂದು ಮಧ್ಯಾಹ್ನ 3.30 ರಿಂದ ರಾತ್ರಿ 7.00 ವರೆಗೆ ತಾಲೂಕಿನ ಜಾಗನಳ್ಳಿಯ ಶ್ರೀ ಗಣಪತಿ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.

    ಗಾಯನ ಕಾರ್ಯಕ್ರಮವನ್ನು ನಾಗಭೂಷಣ ಹೆಗಡೆ, ಬಾಳೆಹದ್ದ ಕುಮಾರಿ ಸಂಗೀತಾ ಹೆಗಡೆ, ಗಿಳಿಗುಂಡಿ ನಡೆಸಿಕೊಡಲಿದ್ದು, ಸಹಕಲಾವಿದರಾಗಿ ತಬಲಾದಲ್ಲಿ ಗುರುರಾಜ ಹೆಗಡೆ ಆಡುಕುಳ, ಸಾರಂಗಿಯಲ್ಲಿ ಗುರುಪ್ರಸಾದ ಹೆಗಡೆ ಗಿಳಿಗುಂಡಿ, ಹಾರ್ಮೋನಿಯಂನಲ್ಲಿ ಭರತ ಹೆಗಡೆ ಹೆಬ್ಬಲಸು ಸಹಕರಿಸಲಿದ್ದಾರೆ. ಕಾರ್ಯಕ್ರಮವನ್ನು ಗಿರಿಧರ ಕಬ್ಬಳ್ಳಿ ನಿರೂಪಿಸಲಿದ್ದು, ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top