ಶಿರಸಿ: ಶ್ರೀಮಾರಿಕಾಂಬಾ ದೇವಾಲಯದ ಆಡಳಿತಕ್ಕೆ ಒಳಪಟ್ಟ ನಗರದ ಶ್ರೀಹನುಮಾನ ವ್ಯಾಯಾಮ ಶಾಲೆಯನ್ನು ರಿಪೇರಿ ಕೆಲಸದ ನಿಮಿತ್ತ ಸ್ಥಗಿತಗೊಳಿಸಲಾಗಿತ್ತು. ಈಗ ಎಲ್ಲ ರಿಪೇರಿ ಕಾರ್ಯ ಮುಗಿದಿರುವುದರಿಂದ ಹನುಮಾನ ವ್ಯಾಯಾಮ ಶಾಲೆಯ ನಿರ್ವಹಣೆಯನ್ನು ದೇವಸ್ಥಾನದ ವತಿಯಿಂದಲೇ ನಡೆಸಲಾಗುತ್ತದೆ. ಅಲ್ಲದೆ ಜೂ.1ರಂದು ಬೆಳಿಗ್ಗೆ 11 ಘಂಟೆಗೆ ಇದರ ಚಾಲನೆ ನೀಡಲಾಗುವುದು. ಆಸಕ್ತರು ಶ್ರೀಹನುಮಾನ ವ್ಯಾಯಾಮ ಶಾಲೆಯಲ್ಲಿ ದೇವಾಲಯದ ನಿಯಮಾವಳಿಯಂತೆ ಪ್ರವೇಶವನ್ನು ಪಡೆದು ಸದುಪಯೋಗ ಪಡೆಯಲು ವಿನಂತಿಸಿದೆ. ಹೆಚ್ಚಿನ ಮಾಹಿತಿಗಾಗಿ ದೇವಸ್ಥಾನದ ಕಚೇರಿಯನ್ನು ಸಂಪರ್ಕಿಸಬಹುದು ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ನಾಳೆಯಿಂದ ಹನುಮಾನ ವ್ಯಾಯಾಮ ಶಾಲೆ ಆರಂಭ
![](https://euttarakannada.in/wp-content/uploads/2021/08/euk-logo-1-640x438.jpg?v=1628473623)