Slide
Slide
Slide
previous arrow
next arrow

ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಪದಾಧಿಕಾರಿಗಳ ಆಯ್ಕೆ

300x250 AD

ಅಂಕೋಲಾ: ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕು ಘಟಕವನ್ನು ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕೊಂಡಳ್ಳಿ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ಕೋಟೆವಾಡದ ಈಡಿಗ ಸರಕಾರಿ ನೌಕರರ ಸೋಮವಾರ ಆಯ್ಕೆ ಪ್ರಕ್ರಿಯೆ ನಡೆಯಿತು.
ರಾಷ್ಟ್ರೀಯ ಈಡಿಗ ಮಹಾಮಂಡಳಿಯ ತಾಲೂಕು ಅಧ್ಯಕ್ಷರಾಗಿ ನಿವೃತ್ತ ಕಾರ್ಯಾಲಯ ಸಹಾಯಕ ಡಿ.ಜಿ.ನಾಯ್ಕ ಅಧ್ಯಕ್ಷರಾಗಿ ಆಯ್ಕೆಯಾದರೆ ನಾಗರಾಜ ಎಂ. ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಮಾದೇವ ಎಂ. ನಾಯ್ಕ ಬಾಳೆಗುಳಿ, ಸಂಜಯ ಆರ್. ನಾಯ್ಕ ಹೊನ್ನೆಕೇರಿ, ಉಮೇಶ ಎನ್. ನಾಯ್ಕ ಬೇಳಾಬಂದರ ಆಯ್ಕೆಯಾದರು.
ಕಾರ್ಯದರ್ಶಿಯಾಗಿ ರಮೇಶ ಎಸ್.ನಾಯ್ಕ ತೆಂಕಣಕೇರಿ, ಸಹಕಾರ್ಯದರ್ಶಿಯಾಗಿ ವಸಂತ ವಿ. ನಾಯ್ಕ ತಿಂಗಳಬೈಲ್, ಖಜಾಂಚಿಯಾಗಿ ಶ್ರೀಪಾದ ಟಿ.ನಾಯ್ಕ, ಮಹಿಳಾ ಅಧ್ಯಕ್ಷೆಯಾಗಿ ಲೀಲಾವತಿ ಬಿ.ನಾಯ್ಕ, ಯುವ ಘಟಕದ ಅಧ್ಯಕ್ಷರಾಗಿ ಮಂಜುನಾಥ ಕೃಷ್ಣ ನಾಯ್ಕ ಆಯ್ಕೆಯಾದರು. ಜೂನ್ 3 ಮತ್ತು 4 ರಂದು ಕುಮಟಾ ನಾಮಧಾರಿ ಕಲ್ಯಾಣ ಮಂಟದಲ್ಲಿ ನಡೆಯಲಿರುವ ಚಿಂತನ-ಮಂಥನ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

300x250 AD
Share This
300x250 AD
300x250 AD
300x250 AD
Back to top