Slide
Slide
Slide
previous arrow
next arrow

ಸುಗಮ ಸಂಚಾರಕ್ಕೆ ಸಂಕಷ್ಟ ತಂದಿಟ್ಟ ಅಗೆದಿಟ್ಟ ಹೊಂಡ

300x250 AD

ದಾಂಡೇಲಿ: ನಗರದ ಪ್ರಮುಖ ರಸ್ತೆ ಹಾಗೂ ಯಾವಾಗಲೂ ಅತೀ ಹೆಚ್ಚು ಜನ ಸಂದಣಿ ಮತ್ತು ವಾಹನಗಳ ಓಡಾಟವಿರುವ ಬರ್ಚಿ ರಸ್ತೆಯ ಬದಿಯಲ್ಲಿ ವಿದ್ಯುತ್ ಕೇಬಲ್ ಅಳವಡಿಕೆಗಾಗಿ ಹೊಂಡ ಅಗೆದು ತಿಂಗಳಾದರೂ ಈವರೆಗೆ ಮುಚ್ಚದಿರುವುದರಿಂದ ಸುಗಮ ವಾಹನ ಸಂಚಾರಕ್ಕೆ, ಸ್ಥಳೀಯ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗತೊಡಗಿದೆ.
ಅಗೆದಿಟ್ಟ ಹೊಂಡದಲ್ಲಿ ವಿದ್ಯುತ್ ಕೇಬಲ್ ಅಳವಡಿಸಿ ಹೊಂಡ ಮುಚ್ಚುವ ಕಾರ್ಯ ಮಾಡದಿರುವುದರಿಂದ ವಾಹನ ಸಂಚಾರಕ್ಕAತೂ ಸಂಚಕಾರವಾಗತೊಡಗಿದೆ. ಆದ್ದರಿಂದ ಈ ಕೂಡಲೆ ಅಗೆದಿಟ್ಟ ಹೊಂಡವನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸ್ಥಳೀಯ ಸಾರ್ವಜನಿಕರು ಮನವಿ ಮಾಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top