• Slide
    Slide
    Slide
    previous arrow
    next arrow
  • ಬೆಂಕಿ ಅವಘಡಕ್ಕೊಳಗಾದ ಮನೆಗೆ ಶಾಸಕ ಶೆಟ್ಟಿ ಭೇಟಿ: ಸಾಂತ್ವನ

    300x250 AD

    ಕುಮಟಾ: ತಾಲೂಕಿನ ಅಳ್ವೆದಂಡೆಯಲ್ಲಿ ಬೆಂಕಿ ಅವಘಡದಿಂದ ಹಾನಿಗೊಳಗಾದ ಮನೆಗೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ, ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು.

    ತಾಲೂಕಿನ ಕಲಭಾಗ ಗ್ರಾಪಂ ವ್ಯಾಪ್ತಿಯ ಅಳ್ವೆದಂಡೆಯ ದತ್ತಾ ಗಾವಡಿ ಅವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದ ಬೆಂಕಿ ಅವಘಡ ಉಂಟಾಗಿ, ಲಕ್ಷಾಂತರ ರೂ. ಹಾನಿಯಾಗಿತ್ತು. ಗೃಹ ಬಳಕೆಯ ಸಾಮಗ್ರಿಗಳೆಲ್ಲ ಸುಟ್ಟು ಕರಕಲಾಗಿದ್ದರಿಂದ ಸಂತ್ರಸ್ತ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

    ಈ ಬಗ್ಗೆ ಮಾಹಿತಿ ಪಡೆದ ಶಾಸಕ ದಿನಕರ ಶೆಟ್ಟಿ ಅವರು, ಸಂತ್ರಸ್ತರ ಮನೆಗೆ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳುವ ಜೊತೆಗೆ ಆರ್ಥಿಕ ನೆರವು ನೀಡಿದರು. ಅಲ್ಲದೇ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು.

    300x250 AD

    ಈ ಸಂದರ್ಭದಲ್ಲಿ ಕಲಭಾಗ ಗ್ರಾಪಂ ಅಧ್ಯಕ್ಷೆ ಗೀತಾ ಜೈವಿಠ್ಠಲ್ ಕುಬಾಲ್, ಸದಸ್ಯ ಗೌರೀಶ್ ಕುಬಾಲ್, ಪ್ರಮುಖರಾದ ಜೈವಿಠ್ಠಲ್ ಕುಬಾಲ್, ಅರುಣ ತದಡಿಕರ್ ಇತರರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top