Slide
Slide
Slide
previous arrow
next arrow

ಕಾಗೇರಿ ಗೆಲುವಿಗಾಗಿ ಪ್ರಾರ್ಥಿಸಿ 50ಕ್ಕೂ‌ ಹೆಚ್ಚು ದೇವಾಲಯಗಳಲ್ಲಿ ಪೂಜೆ

300x250 AD

ಶಿರಸಿ: ಶಿರಸಿ ಸಿದ್ದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ವಿಧಾನಸಭಾ ಅದ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಾಮಪತ್ರ ಸಲ್ಲಿಸಿರುವ ಕಾರಣ ,ಅವರ ಗೆಲುವಿಗಾಗಿ ಪ್ರಾರ್ಥಿಸಿ ಸಭಾದ್ಯಕ್ಷರ ವಿಶೇಷ ಪ್ರಯತ್ನದಿಂದ ಅನುದಾನ ಪಡೆದ ಸಿದ್ದಾಪುರ ತಾಲೂಕಿನ 50 ಕ್ಕೂ ಹೆಚ್ಚು ದೇವಸ್ಥಾನಗಳ ಆಡಳಿತ ಮಂಡಳಿಯವರು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ್ದಾರೆ.

ಸಿದ್ದಾಪುರದ ರಾಘವೇಂದ್ರ ಶಾಸ್ತ್ರಿ ಮನೆಗೆ ಸಭಾಧ್ಯಕ್ಷರು ಭೇಟಿ ನೀಡಿದ ಸಂದರ್ಭದಲ್ಲಿ ವಿಶ್ವೇಶ್ವರ ಹೆಗಡೆಯವರಿಗೆ ಪ್ರಸಾದ ನೀಡಿ ಮತ್ತೊಮ್ಮೆ ಆರಿಸಿ ಬರಲೆಂದು ಹಾರೈಸಿ, ಮುಂಬರುವ ದಿನಗಳಲ್ಲಿ ವಿಶ್ವೇಶ್ವರ ಹೆಗಡೆಯವರು ಮುಖ್ಯಮಂತ್ರಿಯಾಗಿ ಕ್ಷೇತ್ರದ ಹಿರಿಮೆ ಹೆಚ್ಚಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

300x250 AD

ನಾಮಪತ್ರ ಸಲ್ಲಿಸಿದ ದಿನವೇ ಈ ಪೂಜೆ ಮತ್ತು ಹಾರೈಕೆ ನಡೆದದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಪ್ರಮುಖರಾದ ಶಶಿಭೂಷಣ ಹೆಗಡೆ ದೊಡ್ಮನೆ,ರವಿ ಹೆಗಡೆ ಹೂವಿನಮನೆ, ಮಾರುತಿ ನಾಯ್ಕ,ಪ್ರಸನ್ನ ಹೆಗಡೆ,ಗುರುರಾಜ ಶಾನಭಾಗ, ಕೃಷ್ಣಮೂರ್ತಿ ನಾಯ್ಕ್, ವಾಸು ನಾಯ್ಕ್, ನಿತಿನ್ ಬಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top