• Slide
    Slide
    Slide
    previous arrow
    next arrow
  • ಮನಸೂರೆಗೊಂಡ ‘ನಾದಪೂಜೆ’ ಕಾರ್ಯಕ್ರಮ

    300x250 AD

    ಶಿರಸಿ: ಸ್ವರ ಸಂವೇದನಾ ಪ್ರತಿಷ್ಠಾನ (ರಿ) ಗಿಳಿಗುಂಡಿಯು ನಡೆಸುವ ಸಂಕಷ್ಠಿ ಪ್ರಯುಕ್ತ “ನಾದಪೂಜೆ” ಸಂಗೀತ ಕಾರ್ಯಕ್ರಮವು ಏ.9ರಂದು, ತಾಲೂಕಿನ ಶೀಗೆಹಳ್ಳಿಯ ಶ್ರೀ ಬಟ್ಟೆ ಗಣಪತಿಯ ದೇವರ ಸನ್ನಿಧಿಯಲ್ಲಿ, ಶ್ರೀ ಚೆನ್ನಕೇಶವ ದೇವಸ್ಥಾನದ ಆವರಣದಲ್ಲಿ ಸಂಗೀತಾಸಕ್ತರ ಹಾಗೂ ಊರಿನವರ ಸಹಕಾರದೊಂದಿಗೆ ನಡೆಯಿತು.
    ಮೊದಲಿಗೆ ಭರತ್ ಹೆಗಡೆ,ಹೆಬ್ಬಲಸು ಇವರು ಹಾರ್ಮೋನಿಯಂ ಸ್ವತಂತ್ರ ವಾದನದಲ್ಲಿ ರಾಗ್ ಭೀಮಪಲಾಸ್ ನುಡಿಸಿದರು.ಇವರಿಗೆ ನಿತಿನ್ ಹೆಗಡೆ ಕಲಗದ್ದೆ ಇವರು ತಬಲಾ ಸಾಥ್ ನೀಡಿದರು.
    ನಂತರದಲ್ಲಿ ಶ್ರೀಮತಿ ಪ್ರತಿಮಾ ಭಟ್ ಮಾಳಕೊಪ್ಪ ರಾಗ್ ಮಧುವಂತಿಯನ್ನು ಹಾಗೂ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು.ಇವರಿಗೆ ತಬಲಾದಲ್ಲಿ ಅಕ್ಷಯ್ ಭಟ್ ಅಂಸಳ್ಳಿ ಹಾಗೂ ಹಾರ್ಮೋನಿಯಂನಲ್ಲಿ ಭರತ್ ಹೆಗಡೆ ಸಹಕರಿಸಿದರು. ನಂತರದಲ್ಲಿ ಸತೀಶ್ ಭಟ್ ಮಾಳಕೊಪ್ಪ ಇವರಿಂದ ಗಾಯನ ಕಾರ್ಯಕ್ರಮ ಜರುಗಿತು.ಇವರು ರಾಗ್ ಗೋರಖ್ ಕಲ್ಯಾಣ್,ಖಮಾಜ್ ನ್ನು ಪ್ರಸ್ತುತ ಪಡಿಸಿ ರಾಗ್ ಭೈರವಿಯೊಂದಿಗೆ ಕಾರ್ಯಕ್ರಮವನ್ನು ಸಂಪನ್ನಗೊಳಿಸಿದರು.ಇವರಿಗೆ ಗುರುಪ್ರಸಾದ್ ಹೆಗಡೆ ಗಿಳಿಗುಂಡಿ ಹಾಗೂ ಅಕ್ಷಯ್ ಭಟ್ ಸಹಕಲಾವಿದರಾಗಿ ಸಹಕರಿಸಿದರು. ಶೀಗೆಹಳ್ಳಿಯ ಮತ್ತು ಸುತ್ತಮುತ್ತಲಿನ ಸಂಗೀತ ಆಸಕ್ತರು ಕಾರ್ಯಕ್ರಮವನ್ನು ಮೇರಗುಗೊಳಿಸುವಲ್ಲಿ ಸಾಕ್ಷಿಯಾದರು. ಟ್ರಸ್ಟಿನ ಸದಸ್ಯ ದಿನೇಶ್ ಹೆಗಡೆ ಗಿಳಿಗುಂಡಿ ವಂದನಾರ್ಪಣೆ ಸಲ್ಲಿಸಿದರು. ಖ್ಯಾತ ಸಿತಾರ್ ವಾದಕ ಭಾರ್ಗವ ಹೆಗಡೆ ಶೀಗೆಹಳ್ಳಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top