• Slide
    Slide
    Slide
    previous arrow
    next arrow
  • ‘ಸಿವಿಲ್-20 ಇಂಡಿಯಾ 2023’ ಅಂತಾರಾಷ್ಟ್ರೀಯ ಸಮಾವೇಶಕ್ಕೆ ಡಾ. ವೆಂಕಟೇಶ್ ನಾಯ್ಕ

    300x250 AD

    ಶಿರಸಿ : ಮಹಾರಾಷ್ಟ್ರದ ನಾಗಪುರದಲ್ಲಿ ಮಾರ್ಚ್ 20 ರಿಂದ 22 ರವರೆಗೆ 3 ದಿನಗಳ ಕಾಲ ನಡೆಯಲಿರುವ ಅಂತಾರಾಷ್ಟ್ರೀಯ ಜಿ-20 ಒಕ್ಕೂಟ ರಾಷ್ಟ್ರಗಳ ಭಾಗವಾದ ಸಿವಿಲ್-20 ಇಂಡಿಯಾ 2023 ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಸಮುದಾಯಾಭಿವೃದ್ಧಿ ತಜ್ಞ ಹಾಗೂ ಸ್ಕೊಡ್ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ್ ನಾಯ್ಕ ಭಾಗವಹಿಸಲಿದ್ದಾರೆ.

    ಸಿ-20 ಇದೊಂದು ಅಂತಾರಾಷ್ಟೀಯ ನಾಗರೀಕ ಸಮುದಾಯ ಸಂಸ್ಥೆಗಳ ವೇದಿಕೆಯಾಗಿದ್ದು, ಜಿ-20 ದೇಶಗಳ ಒಕ್ಕೂಟದ ಅಧೀಕೃತ ಭಾಗವಾಗಿದೆ. ಸಿವಿಲ್ ಸೊಸೈಟಿ ಆರ್ಗನೈಜೆಷನ್ ವಿಶ್ವದೆಲ್ಲೆಡೆ ಸಮುದಾಯಗಳ ಒಳಿತಿಗಾಗಿ ಕಾರ್ಯ ನಿರ್ವಹಿಸುತ್ತಿದ್ದು, ದೇಶಗಳ ಪ್ರಜಾಪ್ರಭುತ್ವ ವ್ಯವಸ್ಥೆ ಉತ್ತಮವಾಗಿ ನಡೆಯುತ್ತಿರುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಪ್ರಪಂಚದ ದೇಶಗಳ ಸಾಮಾನ್ಯ ನಾಗರೀಕರ ಸಮಸ್ಯೆಗಳು, ಅಶೋತ್ತರಗಳನ್ನು ಜಿ-20 ದೇಶಗಳ ಒಕ್ಕೂಟದ ಅಂತಾರಾಷ್ಟ್ರೀಯ ನಾಯಕರ ಗಮನಕ್ಕೆ ತರಲು ಸಿ-20 ಪ್ರಮುಖ ಹಾಗೂ ಅಧಿಕೃತ ವೇದಿಕೆಯಾಗಿದೆ.
    ಪ್ರತಿಷ್ಠಿತ ಜಿ-20 ಒಕ್ಕೂಟದ ನಾಯಕತ್ವವನ್ನು ಈ ಬಾರಿ ಭಾರತ ವಹಿಸಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಒಕ್ಕೂಟದ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿವಿಲ್-20 ಇಂಡಿಯಾ ಅಂತಾರಾಷ್ಟ್ರೀಯ ಸಮಾವೇಶವನ್ನು ಈ ವರ್ಷ ಮಹಾರಾಷ್ಟ್ರದ ನಾಗಪುರದಲ್ಲಿ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಕರ್ನಾಟಕದಿಂದ 3 ಪ್ರತಿನಿಧಿಗಳು ಭಾಗವಹಿಸುತ್ತಿದ್ದು ಅವರಲ್ಲಿ ಡಾ ವೆಂಕಟೇಶ್ ನಾಯ್ಕ ಒಬ್ಬರಾಗಿದ್ದಾರೆ.
    ವಿಶ್ವದ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಸಾಮಾಜಿಕ ಹೋರಾಟಗಾರರು, ಶೈಕ್ಷಣಿಕ ಹಾಗೂ ಆರ್ಥಿಕ ತಜ್ಞರು, ಸರಕಾರಗಳ ಪ್ರತಿನಿಧಿಗಳು ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ನೀತಿ ನಿರೂಪಕರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
    ಪ್ರಪಂಚದ ರಾಷ್ಟ್ರಗಳ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಹಾಗೂ ಮಾನವೀಯತೆ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಸಿವಿಲ್ ಸೊಸೈಟಿ ಆರ್ಗನೈಜೆಷನ್ ಗಳ ಪಾತ್ರದ ಕುರಿತು ಡಾ.ವೆಂಕಟೇಶ ನಾಯ್ಕ ವಿಷಯ ಮಂಡಿಸಲಿದ್ದಾರೆ.

    300x250 AD

    ಅಭಿನಂದನೆ :
    ಈ ಪ್ರತಿಷ್ಟಿತ ಸಿವಿಲ್-20 ಇಂಡಿಯಾ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸುತ್ತಿರುವ ಡಾ.ವೆಂಕಟೇಶ ನಾಯ್ಕರವರನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಭೀಮಣ್ಣ ನಾಯ್ಕ, ಸ್ಕೊಡ್ವೆಸ್ ಸಂಸ್ಥೆಯ ಅಧ್ಯಕ್ಷರಾದ ಡಾ. ರಾಜೇಂದ್ರಕುಮಾರ, ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಮಸ್ಥ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top