Slide
Slide
Slide
previous arrow
next arrow

ದಿ. ಅಲೋಕ ಹೆಗಡೆ ಸ್ಮರಣಾರ್ಥ ಹವ್ಯಕ ಟ್ರೋಫಿ: ಬಹುಮಾನ ವಿತರಿಸಿದ ಉಪೇಂದ್ರ ಪೈ

300x250 AD

ಸಿದ್ದಾಪುರ : ಸಿದ್ದಾಪುರ ತಾಲೂಕಿನ ಹಲಗೇರಿಯಲ್ಲಿ ದಿವಂಗತ ಅಲೋಕ ಹೆಗಡೆ ಅವರ ಸ್ಮರಣಾರ್ಥಕವಾಗಿ ಅಲೋಕ ಗೆಳೆಯರ ಬಳಗ ವತಿಯಿಂದ ಹವ್ಯಕ ಟ್ರೋಫಿ ಆಯೋಜಿಸಲಾಗಿತ್ತು. ಟ್ರೋಫಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಬಹುಮಾನ ವಿತರಿಸಿ ಮಾತನಾಡಿ, ಅಲೋಕ ಹೆಗಡೆ ಒಬ್ಬ ಉತ್ತಮ ಕ್ರೀಡಾಪಟು ಹಾಗೂ ಕ್ರೀಡಾ ಸಂಯೋಜಕರು ಆಗಿದ್ದರು ಹಾಗೂ ನನಗೆ ಬಹಳ ಹತ್ತಿರದ ಆತ್ಮೀಯ ಕೂಡ ಆಗಿದ್ದರು ಇಂತಹ ವ್ಯಕ್ತಿ ಅಪಘಾತದಲ್ಲಿ ತೀರಿಕೊಂಡಿದ್ದು ಬಹಳ ದುಃಖದ ಸಂಗತಿ ಆವರ ನೆನಪಿಗಾಗಿ ಅವರ ಗೆಳೆಯರು ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದಕ್ಕೆ ಶ್ಲಾಘಿಸಿದರು ಹಾಗೂ ಮುಂದೆಯೂ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಆಲೋಕ ಹೆಗಡೆ ಗೆಳೆಯರ ಬಳಗದವರು, ಸಮಾಜದ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. 

300x250 AD
Share This
300x250 AD
300x250 AD
300x250 AD
Back to top