Slide
Slide
Slide
previous arrow
next arrow

ಅಜಿತ ಮನೋಚೇತನ ರಜತ ಮಹೋತ್ಸವ; ಮರಾಠಿಕೊಪ್ಪದಲ್ಲಿ ಜಾಗೃತಿ ಜಾಥಾ

300x250 AD

ಶಿರಸಿ: ಮಾ.02ರಂದು ನಡೆಯಲಿರುವ ಅಜಿತ ಮನೋಚೇತನಾ ರಜತ ಮಹೋತ್ಸವದ ಅಂಗವಾಗಿ ಮರಾಠಿಕೊಪ್ಪದಲ್ಲಿ ವಿಕಾಸ ವಿಶೇಷ ವಿದ್ಯಾರ್ಥಿಗಳು, ಶಿಕ್ಷಕರು ಜಾಗೃತಿ ಜಾಥಾ ನಡಸಿದರು.
ಕಾರ್ಯಕರ್ತರು ಮನೆಮನೆಗೆ ರಜತ ಉತ್ಸವದ ಆಹ್ವಾನ ನೀಡಿದರು. ನಂತರ ಅಮರ ಜವಾನ್ ಆಜಾದ್ ಪಾರ್ಕ್ನಲ್ಲಿ ವಿಶೇಷ ವಿದ್ಯಾರ್ಥಿಗಳು ಜೈ ಜವಾನ್ ಘೋಷಣೆ ಮೊಳಗಿಸಿದರು. ದೇಶಭಕ್ತಿ ಗೀತೆ ಹಾಡಿದರು. ಮುಖ್ಯ ಶಿಕ್ಷಕಿ ನರ್ಮದಾ ರಜತ ಜಾಥಾ ನಂತರದ ಸಭೆಯಲ್ಲಿ ಎಲ್ಲರನ್ನು ಸ್ವಾಗತಿಸಿದರು.
ಡಾ.ರವಿಕಿರಣ್ ಪಟವರ್ಧನ ಆಜಾದ್ ಪಾರ್ಕ್ಗೆ ಬಂದ ವಿಶೇಷ ವಿದ್ಯಾರ್ಥಿಗಳನ್ನು ನೋಡಿ ಸಂತಸ ವ್ಯಕ್ತಪಡಿಸಿದರು. ಸೈನಿಕರಂತೆ ದೇಶ ಸೇವೆಯಲ್ಲಿ ತೊಡಗಿರುವ ಅಜಿತ ಮನೋಚೇತನಾಕ್ಕೆ ಶುಭ ಹಾರೈಸಿದರು. ಸಂಸ್ಥೆಯ ಅಧ್ಯಕ್ಷ ಸುಧೀರ ಭಟ್, ಅನಂತ ಹೆಗಡೆ ಅಶೀಸರ ಮುಂತಾದವರು ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top