Slide
Slide
Slide
previous arrow
next arrow

ಫೆ.19ಕ್ಕೆ ತೃತೀಯ ಸಂಗೀತ ನಾದೋಪಾಸನೆ

300x250 AD

ಶಿರಸಿ: ಭಗವಾನ್ ಶ್ರೀಧರ ಸಂಗೀತ ವಿದ್ಯಾಲಯದ ತೃತೀಯ ಸಂಗೀತ ನಾದೋಪಾಸನೆ ಕಾರ್ಯಕ್ರಮವು ಫೆ.19, ರವಿವಾರದಂದು ಆದರ್ಶ ವನಿತಾ ಸಮಾಜ ಯಲ್ಲಾಪುರ ನಾಕಾದಲ್ಲಿ ನಡೆಯಲಿದೆ.
ಮಧ್ಯಾಹ್ನ 2-30ರಿಂದ ಉದ್ಘಾಟನಾ ಸಮಾರಂಭವು ಜರುಗಲಿದ್ದು ನಂತರ ವಿದ್ಯಾಲಯದ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವಿರುತ್ತದೆ. ತಬಲಾದಲ್ಲಿ ರಾಘವೇಂದ್ರ ಕಾರಂತ, ಕು. ಸೂರ್ಯ, ಕು. ಚಿನ್ಮಯ, ಹಾರ್ಮೊನಿಯಂ ಸಹಕಾರ ಶ್ರೀಮತಿ ಶೈಲಾ ಮತ್ತಿಘಟ್ಟಾ ನೀಡಲಿದ್ದಾರೆ.

ಸಾಯಂಕಾಲ 7-30 ರಿಂದ ಗಾಯನ ಕಾರ್ಯಕ್ರಮವಿದ್ದು ಸಂಗೀತ ಶಿಕ್ಷಕರಾದ ವಿದುಷಿ ಸ್ಮಿತಾ ಎಮ್. ಹೆಗಡೆ ನಡೆಸಿಕೊಡಲಿದ್ದಾರೆ. ತಬಲಾ ವಿ. ಮಂಜುನಾಥ ಮೋಟಿನಸರ, ಹಾರ್ಮೋನಿಯಂ ಶ್ರೀಸಂವತ್ಸರ, ಸಾಗರ ಸಹಕರಿಸಲಿದ್ದಾರೆ. ಭಗವಾನ್ ಶ್ರೀಧರ ಸಂಗೀತ ವಿದ್ಯಾಲಯದ ಅಧ್ಯಕ್ಷರು, ಕಾರ್ಯದರ್ಶಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಂಗೀತ ಕಲಾಭಿಮಾನಿಗಳಿಗೆ ಆದರದ ಸ್ವಾಗತ ಕೋರಿದ್ದಾರೆ.

300x250 AD
Share This
300x250 AD
300x250 AD
300x250 AD
Back to top