• Slide
    Slide
    Slide
    previous arrow
    next arrow
  • ಫೆ.14ಕ್ಕೆ ಉಚಿತ ಎಲುಬು, ಕೀಲು ತಪಾಸಣೆ ಶಿಬಿರ

    300x250 AD

    ಸಿದ್ದಾಪುರ: ಸ್ಥಳೀಯ ನಿವೃತ್ತ ನೌಕರರ ಸಂಘ, ಲಯನ್ಸ್ ಕ್ಲಬ್ ಹಾಗೂ ಟಿ.ಎಂ.ಎಸ್ ಸಹಯೋಗದಲ್ಲಿ ಫೆ.14ರಂದು ಲಯನ್ಸ ಬಾಲಭವನದಲ್ಲಿ ಬೃಹತ್ ಉಚಿತ ಎಲುಬು ಮತ್ತು ಕೀಲು ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಸಂಘಟಕರಾದ ಸಿ.ಎಸ್.ಗೌಡರ್ ತಿಳಿಸಿದರು.

    ಅವರು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ, ಮಂಗಳೂರು ದೇರಳಕಟ್ಟೆಯ ಕೆ.ಎಸ್.ಹೆಗಡೆ ಆಸ್ಪತ್ರೆಯ ನುರಿತ ವೈದ್ಯರುಗಳಾದ ಡಾ.ವಿಕ್ರಮ ಶೆಟ್ಟಿ, ಡಾ.ಸಿದ್ಧಾರ್ಥ ಶೆಟ್ಟಿ, ಡಾ.ವಿನಯಕುಮಾರ್ ಹಾಗೂ ಡಾ.ಪೃಥ್ವಿ ಕೆ.ಪಿ. ತಪಾಸಣೆ ನಡೆಸುವರು. ಫೆ.14ರ ಮಧ್ಯಾಹ್ನ 2ರಿಂದ 5ರವರೆಗೆ ತಪಾಸಣಾ ಶಿಬಿರ ನಡೆಯಲಿದ್ದು ಹಿಂದಿನ ಹಾಗೂ ಹೊಸ ರೋಗಿಗಳ ತಪಾಸಣೆ ನಡೆಸಲಾಗುವದು. ಅಲ್ಲದೇ ಯಶಸ್ವಿನಿ ಯೋಜನೆಯ ಕುರಿತು ವಿವರವಾದ ಮಾಹಿತಿಯನ್ನು ನೀಡುವರು. ಹೆಲ್ತ ಕಾರ್ಡ್ ನೋಂದಾವಣೆಯನ್ನು ಮಾಡಲಾಗುವದು. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

    300x250 AD

    ಲಯನ್ಸ ಕ್ಲಬ್ ಅಧ್ಯಕ್ಷ ಆರ್.ಎಂ.ಪಾಟೀಲ, ನಿವೃತ್ತ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಎನ್.ವಿ.ಹೆಗಡೆ, ಎ.ಕೆ.ನಾಯ್ಕ, ವಾಸುದೇವ ಶೇಟ್ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top