Slide
Slide
Slide
previous arrow
next arrow

ಪ್ರತಿಭೆಗೆ ಪ್ರೋತ್ಸಾಹ ಅಗತ್ಯ: ಜಿ.ಟಿ.ನಾಯ್ಕ

300x250 AD

ಸಿದ್ದಾಪುರ: ತಾಲೂಕಿನ ಸ್ಥಳೀಯ ಸಹಿಪ್ರಾ ಶಾಲೆ ಕಲ್ಲುರಿನ 2022- 23ನೇ ಸಾಲಿನ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ ಎಂದು ಗ್ರಾ.ಪಂ ಅಧ್ಯಕ್ಷ ಜಿ.ಟಿ.ನಾಯ್ಕ ಹೇಳಿದರು.
ಶಾಲೆಯ ಶೈಕ್ಷಣಿಕ ಮತ್ತು ವ್ಯವಸ್ಥೆಯನ್ನು ಕೊಂಡಾಡಿದರು. ಈ ಸಮಯದಲ್ಲಿ 06 ಜನರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮಾಜಿ ಜಿ.ಪಂ ಸದಸ್ಯರಾದ ಸುಮಂಗಲಾ ನಾಯ್ಕ, ಮಾಜಿ ತಾ.ಪಂ ಸದಸ್ಯರಾದ ನಾಸಿರ್ ವಲ್ಲಿ ಖಾನ್ ಸಾಮಾಜಿಕ ಕಾರ್ಯಕರ್ತರಾದ ಶ್ರೀತಿಮ್ಮಪ್ಪ ಮಡಿವಾಳ, ಹಿತೇಂದ್ರ ನಾಯ್ಕ, ಉಮೇಶ್ ಟಪಲ್, ಮಂಜಪ್ಪ ನಾಯ್ಕ, ಗ್ರಾ.ಪಂ ಸದಸ್ಯರಾದ ಚಂದ್ರಕಾಂತ ರಾಜೇಶ್ವರಿ ನಾಯ್ಕ ಶಾಲೆಯ ಅಭಿವೃದ್ಧಿಯನ್ನು ಪ್ರಶಂಸಿಸಿದರು.
ಮಂಜಪ್ಪ ಬಲೆಗಾರ್ ಸಮಾಜದಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿಯನ್ನು ತಿಳಿಸಿದರು ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ಶ್ರೀಮತಿ ಪಲ್ಲವಿ ಖಾರ್ವಿ ಪ್ರಾರ್ಥಿಸಿದರು. ಶ್ರೀಕಾಂತ ನಾಯ್ಕ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.

300x250 AD
Share This
300x250 AD
300x250 AD
300x250 AD
Back to top