• Slide
    Slide
    Slide
    previous arrow
    next arrow
  • ಅಡುಗೆ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಗಾರ

    300x250 AD

    ಸಿದ್ದಾಪುರ: ಮಧ್ಯಾಹ್ನದ ಉಪಹಾರ ಯೋಜನೆಯ ಅಡುಗೆ ಸಿಬ್ಬಂದಿಗಳಿಗೆ ತರಬೇತಿ ಕಾರ್ಯಗಾರ ಪಟ್ಟಣದ ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ನಡೆಯಿತು.
    ಕಾರ್ಯಗಾರವನ್ನು ಬಿಸಿಯೂಟದ ಜಿಲ್ಲಾ ಶಿಕ್ಷಣಾಧಿಕಾರಿ ಜಿ.ಆಯ್.ನಾಯ್ಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಾಲೆಯ ಅಡುಗೆ ತಯಾರಕರಿಗೆ ಜವಾಬ್ದಾರಿ ಇದೆ. ಮಕ್ಕಳು, ಅಡುಗೆ ಸಿಬ್ಬಂದಿಗಳ ವೈಯಕ್ತಿಕ ಜಾಗೃತಿ ಜೊತೆಗೆ ಸಾಮಾಜಿಕ ಜವಾಬ್ದಾರಿ ಕೂಡಾ ಅವರ ಮೇಲಿದೆ. ಈ ಹೊಣೆಗಾರಿಕೆ ಮಹತ್ವದ್ದು ಎಂದರು. 
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಶಿಕ್ಷಣಾಧಿಕಾರಿ ಸದಾನಂದ  ಸ್ವಾಮಿ ಅನಾಹುತ, ಅವಗಢ  ನಡೆಯದಂತೆ ಶುಚಿ-ರುಚಿ ಅಡುಗೆ ಬಡಿಸುತ್ತಿರುವ ಅಡುಗೆ ನೌಕರರನ್ನು ಶ್ಲಾಘಿಸಿದರು. ಅಕ್ಷರ ದಾಸೋಹದ ಸ.ನಿ.ಭೂಮೇಶ,  ಮಾಧ್ಯಮಿಕ ನೌಕರರ ಸಂಘದ ಅಧ್ಯಕ್ಷ ಆರ್.ಆರ್.ನಾಯ್ಕ, ಕೆ.ಆರ್.ವಿನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಎಂ.ಆರ್.ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top