• Slide
    Slide
    Slide
    previous arrow
    next arrow
  • ರೈತರಿಗಾಗಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಮಾಹಿತಿ ಗೋಷ್ಠಿ ಯಶಸ್ವಿ

    300x250 AD

    ಶಿರಸಿ: ನರ್ಬಾಡ್ ಉತ್ತರ ಕನ್ನಡ ಹಾಗೂ ಬೈಪ್ ಸಂಸ್ಥೆ ಶಿರಸಿ, ಶ್ರೀ ಮಹಾಗಣಪತಿ ವರ್ತೆ ಜಲಾನಯನ ಸಮಿತಿ ದೇವನಹಳ್ಳಿ/ಸರಗುಪ್ಪಾ ಮತ್ತು ತಾಲೂಕಾ ಪಂಚಾಯತ ಹಾಗೂ ತೋಟಗಾರಿಕಾ ಕೃಷಿ ಮೀನುಗಾರಿಕಾ ಹಾಗೂ ಪಶುಪಾಲನಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಾ ಪಂಚಾಯತ ಸಭಾಭವನದಲ್ಲಿ ದೇವನಹಳ್ಳಿ ಸರಗುಪ್ಪಾ ಗ್ರಾಮದ ರೈತರು ಹಾಗೂ ರೈತ ಮಹಿಳೆಯರಿಗೆ ತೋಟಗಾರಿಕಾ ಕೃಷಿ ಮೀನುಗಾರಿಕಾ ಪಶು ಇಲಾಖಾ ಕಾರ್ಯಕ್ರಮಗಳ  ಮಾಹಿತಿ ಗೋಷ್ಠಿಯು ಶಿರಸಿ ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆಯಿತು.

    ಈ ಕಾರ್ಯಕ್ರಮವನ್ನು ತೋಟಗಾರಿಕಾ ಇಲಾಖಾ ಉಪನಿರ್ದೇಶಕರ ಡಾ. ಬಿ.ಪಿ. ಸತೀಶ ಉದ್ಘಾಟಿಸಿ ರೈತರು ಸರಕಾರದ ವಿವಿಧ ಯೋಜನೆಗಳನ್ನು ಉಪಯೋಗಿಸಿಕೊಂಡು ತಮ್ಮ ಆದಾಯವನ್ನು ವೃದ್ಧಿಕೊಳ್ಳುವಂತೆ ಕರೆಕೊಟ್ಟರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ಇಲಾಖೆ ಶಿರಸಿ  ಸಹಾಯಕ ನಿರ್ದೇಶಕ ಮಧುಕರ ನಾಯ್ಕ, ರೈತರು ಯಾವುದೇ ಸಂಕೋಚ ಇಲ್ಲದೇ ಇಲಾಖೆಗಳನ್ನು ಅಥವಾ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಯೋಜನೆಗಳ ಉಪಯೋಗ ಪಡೆಯಲು ಅರ್ಜಿ ಸಲ್ಲಿಸಲು ಸಲಹೆ ನೀಡಿ ಕೃಷಿ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಅದರಂತೆ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ  ಹಾಗೂ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ವೈಭವ ಹಾಗೂ ಹಿರಿಯ ಪಶು ಅಧಿಕಾರಿ ಡಿ.ಎಂ.ಹೆಗಡೆ ತಮ್ಮ ಇಲಾಖೆಗಳ ಕಾರ‍್ಯಕ್ರಮಗಳ ಮಾಹಿತಿಯನ್ನು ಸೇರಿದ ರೈತರು ಹಾಗೂ ರೈತ ಮಹಿಳೆಯರಿಗೆ ನೀಡಿದರು.
    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಹಾಗಣಪತಿ ವರ್ತೆ ಜಲಾನಯನ ಸಮಿತಿ ದೇವನಹಳ್ಳಿ ಅಧ್ಯಕ್ಷ ನಾರಾಯಣ ಮರಾಠಿ ಹಾಗೂ ವರ್ತೆ ಜಲಾನಯನ ಸಮಿತಿ ದೇವನಹಳ್ಳಿ ಕಾರ್ಯದರ್ಶಿ ವಿಶ್ವನಾಥ ದಿವೇಕರ ಉಪಸ್ಥಿತರಿದ್ದರು.
    ಕಾರ್ಯಕ್ರಮದಲ್ಲಿ 25 ಕ್ಕೂ ಹೆಚ್ಚು ಮಹಿಳೆಯರು ದೇವನಹಳ್ಳಿ/ಸರಗುಪ್ಪಾ ಗ್ರಾಮದ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ  ಎಮ್. ಎನ್. ಹೆಗಡೆ ಸ್ವಾಗತಿಸಿ, ನಿರ್ವಹಣೆ  ಮಾಡಿದರು. ಬಾಬಣ್ಣ ವಂದಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top