Slide
Slide
Slide
previous arrow
next arrow

ಜ್ಞಾನೇಶ್ವರಿ ರಜತ ರಥೋತ್ಸವಕ್ಕೆ ಹೊರೆ ಕಾಣಿಕೆ ಸಮರ್ಪಣೆ

300x250 AD

ಸಿದ್ದಾಪುರ: ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರಿಂದ ಶ್ರೀಕ್ಷೇತ್ರ ಕರ್ಕಿ ದೈವಜ್ಞ ಮಠದಲ್ಲಿ ನಡೆಯುತ್ತಿರುವ ಶ್ರೀ ಜ್ಞಾನೇಶ್ವರಿ ರಜತ ರಥೋತ್ಸವ ಸಮಾರಂಭಕ್ಕೆ ಪ್ರತಿ ವರ್ಷದಂತೆ  ಈ ಸಲ ಹೊರೆ ಕಾಣಿಕೆಯನ್ನು ಸಮರ್ಪಿಸಲಾಯಿತು

ಈ ಸಂದರ್ಭದಲ್ಲಿ  ಕರ್ಕಿಯ ದೈವಜ್ಞ ಮಠದ ಪ್ರಧಾನ ಪುರೋಹಿತರಾದ  ವೇದಮೂರ್ತಿ ಗುರು ಭಟ್  ಮಾತನಾಡಿ  ಶ್ರೀ ಜ್ಞಾನೇಶ್ವರಿ ರಜತ ರಥೋತ್ಸವ ಹಾಗೂ ಜ್ಞಾನೇಶ್ವರಿ ಪ್ರಸಾದ ನಿಲಯದ ಉದ್ಘಾಟನೆ ಕಾರ್ಯಕ್ರಮ ಇದೇ ಬರುವ ಜನವರಿ 31 ರಂದು ಜರುಗಲಿದ್ದು ಸಮಸ್ತ ಸಿದ್ದಾಪುರ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರೆಲ್ಲರೂ ಈ ರಜತ ರಥೋತ್ಸವ ಸಮಾರಂಭಕ್ಕೆ  ಆಗಮಿಸಬೇಕೆಂದು ಆಮಂತ್ರಿಸಿದರು.

300x250 AD

ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಶಾಂತಾರಾಮ ವಿ.ಶೇಟ್,ಚಂದ್ರಹಾಸ ಜಿ.ಶೇಟ್,ರಾಮದಾಸ ಎಂ. ರಾಯ್ಕರ್, ವೇದಮೂರ್ತಿ ನಾಗರಾಜ್ ಎಸ್.ಭಟ್, ಜಗನ್ನಾಥ್ ಶೇಟ ವಿನಾಯಕ್ ಎಸ್. ಶೇಟ್,,ಮುಕುಂದ ಎಸ್. ಶೇಟ್, ರಾಘವೇಂದ್ರ ಎಸ್. ರಾಯ್ಕರ್,ರಾಜು ಬನವಾಸಿ, ಸಾಯಿನಾಥ್ ಅನ್ವೇಕರ್, ಬಾಬಾನಂದ ಎಚ್.ಶೇಟ್, ಪ್ರಶಾಂತ್ ಡಿ.ಶೇಟ್ ಇದ್ದರು.

Share This
300x250 AD
300x250 AD
300x250 AD
Back to top