Slide
Slide
Slide
previous arrow
next arrow

ಯುಟ್ಯೂಬ್ ಯಶೋಗಾಥೆ ಸ್ಪರ್ಧೆಯಲ್ಲಿ ಬಹುಮಾನ

300x250 AD

ಸಿದ್ದಾಪುರ: ತಾಲೂಕಿನ ಬೇಡ್ಕಣಿಯ ಯುವ ಕವಯಿತ್ರಿ ಮತ್ತು ಬರಹಗಾರ್ತಿ ಮೇಘನಾ ಶಿವಾನಂದ್ ಭಾನ್ಕುಳಿ ಇವರಿಗೆ ಗುರುಕುಲ ಕಲಾ ಪ್ರತಿಷ್ಠಾನ (ರಿ) ಕೇಂದ್ರ ಸಮಿತಿ ತುಮಕೂರು ಘಟಕ ಏರ್ಪಡಿಸಿದ ರಾಷ್ಟ್ರ ಮಟ್ಟದ ಯುಟ್ಯೂಬ್ ಯಶೋಗಾಥೆ ಸ್ಪರ್ಧೆಯಲ್ಲಿ ಭಾಗವಹಿಸಿ ಚತುರ್ಥ ಸ್ಥಾನವನ್ನು ಪಡೆದು ವಿಜಯಿಯಾಗಿರುತ್ತಾರೆ.

ಇವರಿಗೆ ಗುರುಕುಲ ಕಲಾ ಪ್ರತಿಷ್ಠಾನ (ರಿ) ಕೇಂದ್ರ ಸಮಿತಿ ತುಮಕೂರು ಇವರು 22 ಜನವರಿ 2023 ರಂದು ಬೆಂಗಳೂರಿನ ಶಾಂತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹತ್ತಿರದ ಸ್ಫೂರ್ತಿಧಾಮದಲ್ಲಿ ನಡೆದ ಗುರುಕುಲ ಕಲಾ ದ್ವಿತೀಯ ಸಾಹಿತ್ಯ ಸಮ್ಮೇಳನದಲ್ಲಿ ‘ಗುರುಕುಲ ಯಶೋಗಾಥೆ ವಿಜಯಿ, ರಾಷ್ಟ್ರ ಪ್ರಶಸ್ತಿ’ ಪ್ರಧಾನ ಮಾಡಿ ಗೌರವಿಸಲಾಯಿತು. ಮತ್ತು ಕವಿತೆಯನ್ನು ಪಲ್ಲವಿಸಿ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದಕ್ಕಾಗಿ ಕಿರು ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಈಕೆಯು ಸ್ಥಳೀಯ ಪದವಿ ಕಾಲೇಜಿನ ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿನಿ.

300x250 AD
Share This
300x250 AD
300x250 AD
300x250 AD
Back to top