Slide
Slide
Slide
previous arrow
next arrow

ಜ.12ಕ್ಕೆ ದಿ.ರಾಮಕೃಷ್ಣ ಹೆಗಡೆ ಪುಣ್ಯಸ್ಮರಣೆ

300x250 AD

ಶಿರಸಿ: ದೇಶದ ಪ್ರಬುದ್ಧ, ಮುತ್ಸದ್ಧಿ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ 19ನೇ ಪುಣ್ಯ ತಿಥಿಯನ್ನು ಜ.12ರಂದು ಬೆಳಿಗ್ಗೆ 9.30ಕ್ಕೆ ಯಲ್ಲಾಪುರ ರಸ್ತೆಯ ಶಿರಸಿ ನಾಕಾದಲ್ಲಿರುವ ದಿ.ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಅವರ ಪುತ್ಥಳಿಗೆ ದೀಪ ಬೆಳಗಿಸಿ ಮಾಲಾರ್ಪಣೆ ಮಾಡುವ ಮೂಲಕ ಆಚರಿಸಲಾಗುತ್ತಿದೆ.
ದಿ.ರಾಮಕೃಷ್ಣ ಹೆಗಡೆ ಅಭಿಮಾನಿಗಳು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರನ್ನು ಮನನ ಮಾಡಿಕೊಳ್ಳಬೇಕಾಗಿ ರಾಮಕೃಷ್ಣ ಹೆಗಡೆ ಅಭಿಮಾನಿ ವೇದಿಕೆಯ ಅಧ್ಯಕ್ಷ ವೆಂಕಟೇಶ ಹೆಗಡೆ ಹೊಸಬಾಳೆ ವಿನಂತಿಸಿದ್ದಾರೆ. ದಿ.ರಾಮಕೃಷ್ಣ ಹೆಗಡೆ ಅವರ ಪುಣ್ಯ ತಿಥಿಯಂದು ಅವರ ನೆನಪನ್ನು ಅವರ ಮೌಲ್ಯ, ತತ್ವ, ಆದರ್ಶಗಳನ್ನು ಹಾಗೂ ಅವರು ನಡೆದು ಬಂದ ದಾರಿ ಕುರಿತು ಈಗಿನ ಯುವಜನರಲ್ಲಿ ಜೀವಂತವಾಗಿರಿಸಲು ಒಂದು ‘ಪುಣ್ಯ ಸ್ಮರಣೆ’ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ನಡೆಸಲು ಆಲೋಚಿಸಿರುವದಾಗಿಯೂ ಕೆಲವೊಂದು ಅನಾನುಕೂಲತೆಗಳಿಂದಾಗಿ ಇದನ್ನು ಕಾರ್ಯಗತಗೊಳಿಸಲು ಆಗಿರುವದಿಲ್ಲ. ಕಾರಣ ಚುನಾವಣೆ ಘೋಷಣೆಯಾಗುವ ಪೂರ್ವದಲ್ಲಿ ಅವರ ಪುಣ್ಯ ಸ್ಮರಣೆಯ ಕಾರ್ಯಕ್ರಮವನ್ನು ಆಯೋಜಿಸಲಾಗುವದೆಂದು ಅವರು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top