Slide
Slide
Slide
previous arrow
next arrow

ಚಿಕಿತ್ಸೆಗೆ ನೆರವಾಗಲು ಮನವಿ

300x250 AD

ಅಂಕೋಲಾ: ತಾಲೂಕಿನ ಕೊಡ್ಲಗದ್ದೆ ಜೋಗಿಮನೆ ನಿವಾಸಿಯಾಗಿರುವ ಸುಬ್ರಾಯ ಗಾಂವ್ಕಾರ್ ಅವರು ಎರಡೂವರೆ ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ವಾರಕ್ಕೆ ಎರಡು ಬಾರಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದು, ನಿರಂತರ ಡಯಾಲಿಸಿಸ್ ನಿಂದ ದೇಹ ದಿನದಿಂದ ದಿನಕ್ಕೆ ಶಕ್ತಿ ಕಳೆದುಕೊಳ್ಳುತ್ತಿದೆ. ಹಾಗಾಗಿ ಕಿಡ್ನಿ ಬದಲಾಯಿಸಲು ಕುಟುಂಬ ನಿರ್ಧರಿಸಿದ್ದು, ಕನಿಷ್ಠ 20- 25 ಲಕ್ಷ ರೂ. ವೆಚ್ಚ ತಗಲುವುದಾಗಿ ವೈದ್ಯರು ತಿಳಿಸಿದ್ದಾರೆ.
ಬಡ ಕೃಷಿಕರಾಗಿರುವ ಇವರಿಂದ ಅಷ್ಟೊಂದು ವೆಚ್ಚ ಭರಿಸಲು ಸಾಧ್ಯವಿಲ್ಲ. ಹಾಗಾಗಿ ದಾನಿಗಳು, ಸಂಘ-ಸOಸ್ಥೆಗಳು ಉದಾರ ನೆರವು ನೀಡಿ ಕಿಡ್ನಿ ಬದಲಾಯಿಸಲು ಸಹಾಯ ಹಸ್ತ ಚಾಚುವಂತೆ ಅವರ ಕುಟುಂಬಸ್ಥರು ಮನವಿ ಮಾಡಿದ್ದಾರೆ. ದಾನಿಗಳು ದೇಣಿಗೆಯನ್ನು ನೇರವಾಗಿ ಅವರ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಗುಳ್ಳಾಪುರ ಶಾಖೆ ಖಾತೆ ಸಂಖ್ಯೆ: 89011880752 (ಐಎಫ್‌ಎಸ್‌ಸಿ ಕೋಡ್- KVGB0009555) ಅಥವಾ ಕೆಡಿಸಿಸಿ ಬ್ಯಾಂಕ್ ಖಾತೆ ಸಂಖ್ಯೆ: 622003525983 (ಐಎಫ್‌ಎಸ್‌ಸಿ ಕೋಡ್: KSCB0016001)ಗೆ ಕಳುಹಿಸಬಹುದು. ಅವರ ಮೊಬೈಲ್ ಸಂಖ್ಯೆ: 9481031674.

300x250 AD
Share This
300x250 AD
300x250 AD
300x250 AD
Back to top