Slide
Slide
Slide
previous arrow
next arrow

ಹಿರೇಗುತ್ತಿ ಕಾಲೇಜು ಸಂಸ್ಕಾರ ನೀಡುತ್ತಿದೆ: ಸುನಿಲ್ ಪೈ

300x250 AD

ಗೋಕರ್ಣ: ವಿದ್ಯಾರ್ಥಿಗಳಿಗೆ ಬಾಳಲ್ಲಿ ಜ್ಞಾನ ಎಷ್ಟು ಮುಖ್ಯವೋ ಸಂಸ್ಕಾರ ಅದಕ್ಕಿಂತಲೂ ಮುಖ್ಯ. ತಂದೆ ತಾಯಿಯ ಋಣಕ್ಕೆ ತಲೆಬಾಗಿ ಬಾಳುವ ಅರಿವನ್ನು ಶಾಲೆ ಕಾಲೇಜು ದಿನಗಳಲ್ಲಿ ಮಕ್ಕಳು ಕಲಿಯಬೇಕು. ಈ ದಿಶೆಯಲ್ಲಿ ಹಿರೇಗುತ್ತಿ ಕಾಲೇಜು ಸಂಸ್ಕಾರಯುತ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ ಎಂದು ಸಿದ್ಧಿವಿನಾಯಕ ದೇವಸ್ಥಾನ ಮಾದನಗೇರಿಯ ಧರ್ಮದರ್ಶಿ ಸುನಿಲ್ ಪೈ ಅಭಿಪ್ರಾಯಪಟ್ಟರು.
ಇತ್ತೀಚೆಗೆ ನಡೆದ ಸರಕಾರಿ ಪದವಿಪೂರ್ವ ಕಾಲೇಜು ಹಿರೇಗುತ್ತಿಯ ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಹನುಮಂತ ಬೆಣ್ಣೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸತೀಶ ಬಿ.ನಾಯ್ಕ, ವಿದ್ಯಾರ್ಥಿಗಳ ಶಿಸ್ತು ಮತ್ತು ಕಾಲೇಜಿನ ಅಚ್ಚುಕಟ್ಟುತನವನ್ನು ಮನಸಾರೆ ಮೆಚ್ಚಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಸತೀಶ್ ನಾಯ್ಕರವರಿಗೆ ಕಾಲೇಜಿನ ವತಿಯಿಂದ ಗೌರವ ಸಮರ್ಪಣೆ ಮಾಡಲಾಯಿತು.
ಅತಿಥಿಗಳಾದ ವಿಶ್ರಾಂತ ಪ್ರಾಚಾರ್ಯ ಪ್ರೇಮಾನಂದ ಗಾಂವಕರರವರು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಯಶಸ್ಸಿನ ಸೂತ್ರಗಳನ್ನು ವಿವರಿಸಿ ಸ್ಫೂರ್ತಿ ತುಂಬಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಅರುಣ ಹೆಗಡೆಯವರು ಕಾಲೇಜಿನ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತ ಎಲ್ಲರನ್ನು ಕೃತಜ್ಞತೆಯಿಂದ ಸ್ಮರಿಸಿದರು. ವೇದಿಕೆಯಲ್ಲಿ ಹಿರೇಗುತ್ತಿ ಪ್ರೌಢಶಾಲಾ ಮುಖ್ಯಶಿಕ್ಷಕ ರೋಹಿದಾಸ ಗಾಂವಕರ, ದಾನಿಗಳಾದ ಬೊಮ್ಮಯ್ಯ ನಾಯಕ, ದೇವರಾಯ ನಾಯಕ ಮುಂತಾದವರು ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕ ನಾಗರಾಜ ಗಾಂವಕರ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ರಮೇಶ ಗೌಡ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಉಪನ್ಯಾಸಕಿ ಸೀಮಾ ಪಟಗಾರ ವಂದಿಸಿದರು.
ಉಪನ್ಯಾಸಕಿಯರಾದ ಶಾರದಾ ನಾಯಕ ವರದಿ ವಾಚಿಸಿದರು. ಸುಜಾತಾ ನಾಯಕ ಮತ್ತು ನೇತ್ರಾವತಿ ನಾಯಕ ದತ್ತಿನಿಧಿ, ಸಾಂಸ್ಕೃತಿಕ ಮತ್ತು ಕ್ರೀಡಾ ಬಹುಮಾನ ವಿತರಣೆ ನಿರ್ವಹಿಸಿದರು. ದೀಕ್ಷಾ ಸಂಗಡಿಗರು ಪ್ರಾರ್ಥಿಸಿ ಸ್ವಾಗತಗೀತೆ ಹಾಡಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕವಾದ ಮನರಂಜನಾ ಕಾರ್ಯಕ್ರಮಗಳು ನೆರವೇರಿದವು.

300x250 AD
Share This
300x250 AD
300x250 AD
300x250 AD
Back to top