Slide
Slide
Slide
previous arrow
next arrow

ಗೋಕರ್ಣ ಬೀಚ್’ನಲ್ಲಿ ಅಲೆಗೆ ಸಿಲುಕಿದ್ದ ಈರ್ವರ ರಕ್ಷಣೆ

300x250 AD

ಗೋಕರ್ಣ: ಹೊಸ ವರ್ಷದ ಸಂಭ್ರಮಾಚರಣೆ ಜಿಲ್ಲೆಯಲ್ಲಿ ಜೋರಾಗಿದ್ದು, ಅದರಲ್ಲೂ ಕಡಲತೀರಗಳಿಗೆ ಜನಸಾಗರವೇ ಹರಿದುಬರುತ್ತಿದೆ. ಇದೇ ವೇಳೆ ಮೋಜು-ಮಸ್ತಿಗಾಗಿ ಬರುವ ಪ್ರವಾಸಿಗರು ಆಳ ಅರಿಯದೇ ನೀರಿಗೆ ಇಳಿದು ಅಪಾಯ ತಂದುಕೊಳ್ಳುವ ಪ್ರಕರಣಗಳೂ ಹೆಚ್ಚುತ್ತಿದೆ. ಗೋಕರ್ಣ ಮುಖ್ಯ ಕಡಲತೀರದಲ್ಲೂ ಪ್ರಕರಣ ನಡೆದಿದ್ದು, ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಗರಿಬ್ಬರನ್ನು ರಕ್ಷಣೆ ಮಾಡಲಾಗಿದೆ.

ಧಾರವಾಡ ಮೂಲದ ಸಿದ್ದಲಿಂಗ ಹಾಗೂ ನಿತೇಶ್ ಎಂಬ ಇಬ್ಬರು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದ್ದು, ಗೋಕರ್ಣ ಪ್ರವಾಸಕ್ಕೆ ಬಂದ ವೇಳೆ ಇವರು ಮುಖ್ಯ ಕಡಲತೀರದಲ್ಲಿ ಈಜಲು ತೆರಳಿದ್ದರು. ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗುತ್ತಿದ್ದು, ಕೂಡಲೇ ಓಂ ವಾಟರ್ ಸ್ಪೋರ್ಟ್ಸ್ನ ಚಿದಾನಂದ ಲಕ್ಕುಮನೆ, ಬೋಟ್ ಸಹಾಯಕ ದೀಪಕ್ ಗೌಡ ಇವರನ್ನು ರಕ್ಷಣೆ ಮಾಡಿದ್ದಾರೆ. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

300x250 AD
Share This
300x250 AD
300x250 AD
300x250 AD
Back to top