• Slide
    Slide
    Slide
    previous arrow
    next arrow
  • ಮಕ್ಕಳೊಂದಿಗೆ ಬೆರೆತು ಮಗುವಾದ ಶಾಸಕ ದಿನಕರ ಶೆಟ್ಟಿ

    300x250 AD

    ಅಂಕೋಲಾ: ಬೆಳಗಾವಿ ಅಧಿವೇಶನಕ್ಕೆ ಹೊರಟಿದ್ದ ಕುಮಟಾ ಶಾಸಕ ದಿನಕರ ಶೆಟ್ಟಿ, ದಾರಿಯಲ್ಲಿ ಸಿಕ್ಕ ಚಿಣ್ಣರೊಂದಿಗೆ ಕುಶಲೋಪರಿ ವಿಚಾರಿಸುತ್ತಾ ಕೆಲ ಸಮಯ ಕಳೆದು ಗಮನ ಸೆಳೆದರು.
    ಬೆಳಗಾವಿ ಅಧಿವೇಶನ ಹಿನ್ನಲೆಯಲ್ಲಿ ಅಂಕೋಲಾ ಮಾರ್ಗವಾಗಿ ತೆರಳುವಾಗ ಅಗಸೂರು ಬಳಿ ಕೆ.ಪಿ.ಎಸ್ ಶಾಲೆಯ ವಿದ್ಯಾರ್ಥಿಗಳು ಸಾಗುತ್ತಿದ್ದುದನ್ನ ಕಂಡ ಶೆಟ್ಟಿ, ತಮ್ಮ ಕಾರು ನಿಲ್ಲಿಸಿ ಮಕ್ಕಳೊಂದಿಗೆ ಶಿಕ್ಷಣದ ಬಗ್ಗೆ ಮಾಹಿತಿ ಪಡೆದರು. ವಿದ್ಯಾರ್ಥಿಗಳ ದೂರಾಲೋಚನೆಗಳನ್ನ ಕೇಳಿದರು. ಅಲ್ಲದೇ, ದೇಶಕ್ಕೆ ಒಪ್ಪುವ ಉತ್ತಮ ನಾಗರಿಕರಾಗಿ ಬಾಳುವಂತೆ ಕಿವಿಮಾತು ಹೇಳಿದರು. ಮಕ್ಕಳು ಕೂಡ ಶಾಸಕರೊಂದಿಗೆ ಮಾತನಾಡಿ ಖುಷಿಪಟ್ಟರು. ತೆರಳುವ ಪೂರ್ವ ತಮ್ಮ ಕಾರಿನಲ್ಲಿದ್ದ ಪೆನ್‌ಗಳನ್ನ ವಿದ್ಯಾರ್ಥಿಗಳಿಗೆ ವಿತರಿಸಿದರು.
    ಈ ಸಂದರ್ಭದಲ್ಲಿ ಸ್ಥಳೀಯರಾದ ಗೋಪಾಲ ನಾಯಕ ಹಾಗೂ ಇತರರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top