Slide
Slide
Slide
previous arrow
next arrow

ಕ್ರೀಡೆ ಜೊತೆಗೆ ಶಿಕ್ಷಣದ ಬಗ್ಗೆಯೂ ಗಮನಹರಿಸಿ: ಮಂಜುನಾಥ ನಾಯ್ಕ

300x250 AD

ಹೊನ್ನಾವರ: ಕ್ರೀಡೆಯೊಂದಿಗೆ ಮಕ್ಕಳು ಶಿಕ್ಷಣದ ಬಗ್ಗೆಯೂ ಗಮನಹರಿಸಿ ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕುಮಟಾ- ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಮುಖಂಡ ಮಂಜುನಾಥ ನಾಯ್ಕ ಹೇಳಿದರು.

ಅವರು ಶ್ರೀ ಮಹಾಸತಿ ಮಾದಿಕೊಟ್ಟಿಗೆ ಅಗ್ರಹಾರ, ಹಳದಿಪುರ ಇವರ ಆಶ್ರಯದಲ್ಲಿ ಅಯೋಜನೆಗೊಂಡಿದ್ದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಾಕರಾಗಿ ಆಗಮಿಸಿದ ಮಾತನಾಡಿ ಇಂದಿನ ದಿನಗಳಲ್ಲಿ ಉದ್ಯೋಗಕ್ಕೆ ಯುವಕರು ಹರಸಾಹಸ ಪಡುವಂತಾಗಿದೆ ಆದ್ದರಿಂದ ಉನ್ನತ ಶಿಕ್ಷಣ ಪಡೆದು ಉದ್ಯೋಗ ಪಡೆದು ಜೀವನದಲ್ಲಿ ಆರ್ಥಿಕ ಸುಧಾರಣೆ ಮಾಡಿಕೊಳ್ಳಬೇಕು ಎಂದರು.

300x250 AD

ಈ ಸಂದರ್ಭದಲ್ಲಿ ಪ್ರಮುಖರಾದ ಮಹೇಶ ನಾಯ್ಕ, ಮಹೇಶ ಗೌಡ, ಸೀತಾರಾಮ್ ಗೌಡ, ಗಣೇಶ ಗೌಡ, ರಾಜೇಶ ಗೌಡ, ಸುಭಾಸ ಗೌಡ, ಸಂದೇಶ್ ಗೌಡ ಮುಂತಾದವರು ಇದ್ದರು.

Share This
300x250 AD
300x250 AD
300x250 AD
Back to top