Slide
Slide
Slide
previous arrow
next arrow

ಕಾರು- ಸ್ಕೂಟಿ ಡಿಕ್ಕಿ; ಸವಾರರಿಬ್ಬರಿಗೆ ಗಂಭೀರ ಗಾಯ

300x250 AD

ಅಂಕೋಲಾ: ಕಾರು ಮತ್ತು ಸ್ಕೂಟಿ ನಡುವೆ ನಡೆದ ಅಪಘಾತದಲ್ಲಿ ಸ್ಕೂಟಿ ಸವಾರರಿಬ್ಬರಿಗು ಗಂಭೀರ ಗಾಯಗೊಂಡ ಘಟನೆ NH-66ರ ಹಾರವಾಡಾ ಬಳಿ ನಡೆದಿದೆ.
ಕುಮಟಾ ತಾಲೂಕಿನ ವನ್ನಳ್ಳಿ ಗ್ರಾಮದ ನಿವಾಸಿಗಳಾದ ಲೋಕೇಶ್ವರ ಹರಿಕಂತ (46), ಸರಸ್ವತಿ ಹರಿಕಂತ (41) ಎಂಬುವವರಿಗೆ ಗಾಯಗಳಾಗಿದೆ. ಹೊನ್ನಾವರ ನವಿಲಗೋಣದ ಪ್ರಕಾಶ ದೇಶಭಂಡಾರಿ ಎಂಬಾತ ತನ್ನ ಕಾರನ್ನು ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಬಂದು, ನಿಯಂತ್ರಣ ಮಾಡಲಾರದೆ ಎದುರಿನಲ್ಲಿ ಹೋಗುತ್ತಿದ್ದ ಸ್ಕೂಟಿಯ ಹಿಂಬದಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದಾನೆ.
ಅಪಘಾತದಲ್ಲಿ ಸ್ಕೂಟಿ ಸವಾರರಿಗೆ ಕೈಕಾಲು ಮತ್ತು ತಲೆ ಭಾಗಕ್ಕೆ ಹೊಡೆತ ಬಿದ್ದಿದೆ. ತಕ್ಷಣ ಗಾಯಾಳುಗಳನ್ನು ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರ ಮೆಡಿಕಲ್ ಕಾಲೇಜಿಗೆ ಕರೆದೊಯ್ಯಲಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top