Slide
Slide
Slide
previous arrow
next arrow

ವಾಜಗದ್ದೆಯಲ್ಲಿಂದು ‘ನಮ್ಮ ನಿಮ್ಮೊಳಗೊಬ್ಬ’ ನಾಟಕ ಪ್ರದರ್ಶನ

300x250 AD

ಸಿದ್ದಾಪುರ: ತಾಲೂಕಿನ ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಸಭಾಂಗಣದಲ್ಲಿ ಒಡ್ಡೋಲಗ ಹಿತಲಕೈ ಇವರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ರಾಜೇಂದ್ರ ಕಾರಂತ ರಚನೆಯ ‘ನಮ್ಮ ನಿಮ್ಮೊಳಗೊಬ್ಬ’ ನಾಟಕ ಡಿ.20ರಂದು ಸಂಜೆ 7ರಿಂದ ಪ್ರದರ್ಶನಗೊಳ್ಳಲಿದೆ.

ಕಾರವಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಮಚಂದ್ರ ಎಂ.ಕೆ, ವಾಜಗದ್ದೆ ದುರ್ಗಾವಿನಾಯಕ ದೇವಸ್ಥಾನದ ಮೊಕ್ತೇಸರ  ಎಸ್.ಎಂ.ಹೆಗಡೆ ಪೇಟೇಸರ,ಟೀಮ್ ಪರಿವರ್ತನೆ ಸಂಸ್ಥಾಪಕ ಹಿತೇಂದ್ರ ನಾಯ್ಕ ಗವಿನಗುಡ್ಡ, ಹಾರ್ಸಿಕಟ್ಟಾ ಅಘನಾಶಿನಿ ಸಾಂಬಾರು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಹೆಗಡೆ ಕುಂಬಾರಕುಳಿ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹೆಗಡೆ ಹಾರ್ಸಿಮನೆ, ದುರ್ಗಾವಿನಾಯಕ ಕೃಷಿಕ ಯುವಕ ಸಂಘದ ಅಧ್ಯಕ್ಷ ಗಣಪತಿ ಹೆಗಡೆ ಸುಳಗಾರ ಉಪಸ್ಥಿತರಿರುತ್ತಾರೆ.
ನಂತರ ಪ್ರದರ್ಶನಗೊಳ್ಳುವ ನಾಟಕದಲ್ಲಿ ನಾಗರಾಜ ನಾಯ್ಕ ಬರೂರು,ಕೇಶವ ಹೆಗಡೆ ಕಿಬ್ಳೆ,ಪುಷ್ಪಾ ರಾಘವೇಂದ್ರ ಸಾಗರ, ಮಾಧವ ಶರ್ಮ ಕಲಗಾರ, ಪ್ರಸನ್ನಕುಮಾರ ಎನ್.ಎಂ ಸಾಗರ, ಗಣಪತಿ ಬಿ.ಹಿತ್ಲಕೈ, ಶ್ರೀರಾಮ ಯು.ಗೌಡ ಹೊಸೂರು, ಸಂಧ್ಯಾ ಶಾಸ್ತ್ರಿ ಭೈರುಂಭೆ, ನವೀನಕುಮಾರ ಕುಣಜಿ ಪಾತ್ರನಿರ್ವಹಿಸಲಿದ್ದಾರೆ.

300x250 AD
Share This
300x250 AD
300x250 AD
300x250 AD
Back to top