Slide
Slide
Slide
previous arrow
next arrow

ಕುಡಿತಕ್ಕೆ ಹಣ ನೀಡಲಿಲ್ಲವೆಂದು ಹೆತ್ತಾಯಿಯನ್ನೆ ಕೊಂದ ಮಗ; ಆರೋಪಿ ಮಧುಕರ್ ಭಟ್ ಪೋಲೀಸ್ ವಶಕ್ಕೆ

300x250 AD

ಕುಮಟಾ: ಸಾರಾಯಿ ಕುಡಿಯಲು ಹಣ ಕೇಳಿದ್ದಕ್ಕೆ ಕೊಡದ ತಾಯಿಯನ್ನೇ ಕಟುಕ ಮಗನೊಬ್ಬ ಭೀಕರವಾಗಿ ಹತ್ಯೆಗೈದಿರುವ ಘಟನೆ ಕುಮಟಾ ತಾಲೂಕಿನ ಮೇಲಿನ ಕೂಜಳ್ಳಿಯ ಬಚ್ಕಡ ಎಂಬಲ್ಲಿ ನಡೆದಿದೆ.

ಗೀತಾ ಭಟ್ (60) ಕೊಲೆಯಾದ ದುರ್ದೈವಿ. ಮಧುಕರ್ ಭಟ್, ತಾಯಿ ಹತ್ಯೆ ಮಾಡಿರುವ ಮಗ. ಸಾರಾಯಿ ಚಟಕ್ಕೆ ದಾಸನಾಗಿದ್ದ ಮಧುಕರ್, ತಾಯಿಗೆ ಎಣ್ಣೆ ಕುಡಿಯೋದಕ್ಕೆ ಹಣ ನೀಡುವಂತೆ ದಿನವೂ ಪೀಡಿಸುತ್ತಿದ್ದ. ಹೀಗೆ ಇಂದು ಕೂಡ ಪೀಡಿಸಿ ಜಗಳ ನಡೆಸಿದ್ದು, ಹಣ ನೀಡದ್ದಕ್ಕೆ ಸಿಟ್ಟಿನಲ್ಲಿ ತಾಯಿಯ ತಲೆಯ ಮೇಲೆ ದೊಣ್ಣೆಯಲ್ಲಿ ಹೊಡೆದಿದ್ದಾನೆ. ದೊಣ್ಣೆಯ ಏಟಿಗೆ ರಕ್ತಸ್ರಾವವಾಗಿ ಗೀತಾ ಕುಸಿದು ಬಿದ್ದು ಮೃತಪಟ್ಟಿದ್ದಾಳೆ.

300x250 AD

ಮಗನಿಗೆ ತಂದೆ ವಿಶ್ವೇಶ್ವರ ಭಟ್ ಕೂಡ ಬೆಂಬಲ ನೀಡುತ್ತಿದ್ದ ಎಂದು ಊರಿನವರು ದೂರಿದ್ದು, ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತಂದೆ- ಮಗ ಇಬ್ಬರನ್ನೂ ಠಾಣೆಗೆ ಕರೆದೊಯ್ದಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

Share This
300x250 AD
300x250 AD
300x250 AD
Back to top