Slide
Slide
Slide
previous arrow
next arrow

ಆಕಸ್ಮಿಕವಾಗಿ ಕೆರೆಯಲ್ಲಿ ಮುಳುಗಿ ಅಯ್ಯಪ್ಪ ಮಾಲಾಧಾರಿ ಮೃತ

300x250 AD

ಭಟ್ಕಳತಾಲ್ಲೂಕಿನ ಗಡಿ ಭಾಗವಾಗಿರುವ ಬೈಲೂರಿನ ಕಾಸಗೇರಿಯಲ್ಲಿ ಕೆರೆಯ ನೀರಿನ ಹೊಂಡದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಅಯ್ಯಪ್ಪ ಮಾಲಾಧಾರಿಯೋರ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಅಯ್ಯಪ್ಪ ಮಾಲಾಧಾರಿಯನ್ನು ಅಭಿಷೇಕ ಗಣಪಯ್ಯ ನಾಯ್ಕ (22) ಎಂದು ಗುರುತಿಸಲಾಗಿದೆ.

ಈತನು ಕಳೆದ ಒಂದು ವಾರದ ಹಿಂದಷ್ಟೇ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ. ರಾತ್ರಿ ಬೈಲೂರು ಗ್ರಾಮದ ಕಾಸಗೇರಿ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಉಳಿಯುತ್ತಿದ್ದು, ಹಗಲಿನಲ್ಲಿ ಮನೆಗೆ ಬಂದು ಹೋಗುತ್ತಿದ್ದನು. ಬೈಲೂರು ಗ್ರಾಮದ ಕಾಸಗೇರಿಯಲ್ಲಿ ಲುಮಾ ಮಾನು ಮಾರಾಠಿ ಇವರಿಗೆ ಸಂಬಂಧ ಪಟ್ಟ ಅಡಿಕೆ ತೋಟದ ಮೇಲ್ಭಾಗದಲ್ಲಿರುವ ಹೊಂಡದ ನೀರಿಗೆ ಸ್ನಾನಕ್ಕೆ ಎಂದು ಹೋದವನು ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿನ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top