• Slide
    Slide
    Slide
    previous arrow
    next arrow
  • ಕಬಡ್ಡಿಯಲ್ಲಿ ಖೇಮು ಹುಂಬೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

    300x250 AD

    ಹಳಿಯಾಳ: ಪಟ್ಟಣದ ಕೆಎಲ್‌ಎಸ್ ಪಿಯು ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ ರಾಯಪಟ್ಟಣದ ಗ್ರಾಮೀಣ ಪ್ರತಿಭೆ ಖೇಮು ಹುಂಬೆ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಷ್ಟ್ರ ಮಟ್ಟದ ಕಬಡ್ಡಿ ಕ್ರೀಡೆಗೆ ಆಯ್ಕೆಯಾಗಿದ್ದಾನೆ.
    ಆದಿಚುಂಚನಗಿರಿಯ ಶ್ರೀಗಂಗಾಧರೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಉತ್ತರ ಕನ್ನಡ ತಂಡವನ್ನು ಪ್ರತಿನಿಧಿಸಿ ಅತ್ಯುತ್ತಮ ಡಿಪೆಂಡರ್ ಪ್ರಶಸ್ತಿಯನ್ನು ಪಡೆದಿದ್ದು, ಉತ್ತಮ ಪ್ರದರ್ಶನ ನೀಡಿದ್ದಕ್ಕಾಗಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾನೆ.
    ಖೇಮು ಹುಂಬೆ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಇದಕ್ಕೆ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ವಿನಾಯಕ ಲೋಕುರ, ಪ್ರಾಚಾರ್ಯರಾದ ಡಾ.ಎಸ್.ಎಮ್.ಗಲಗಲಿ, ಶೈಕ್ಷಣಿಕ ಸಯೋಜಕ ಶ್ರೀನಿವಾಸ ಪ್ರಭು, ಕ್ರೀಡಾ ತರಬೇತುದಾರ ಮಲ್ಲಿಕಾರ್ಜುನ ಕಾಜಗಾರ ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top