• Slide
    Slide
    Slide
    previous arrow
    next arrow
  • ಕಾಳಿ ಪ್ರವಾಸೋದ್ಯಮ ಸಂಸ್ಥೆಯ ನೂತನ ಅಧ್ಯಕ್ಷರ ಆಯ್ಕೆ

    300x250 AD

    ಜೊಯಿಡಾ: ಕಾಳಿ ಪ್ರವಾಸೋದ್ಯಮ ಸಂಸ್ಥೆಯ ಆಡಳಿತ ಮಂಡಳಿಯ ಸಭೆ ಹಾಗೂ ಸಾಮಾನ್ಯ ಸಭೆ ಸಂಜೀವಿನಿ ಸೇವಾ ಟ್ರಸ್ಟ್ ಸಭಾಭವನದಲ್ಲಿ ಶುಕ್ರವಾರ ನಡೆಯಿತು.
    ಸಭೆಯ ಅಧ್ಯಕ್ಷತೆಯನ್ನು ಕಾಳಿ ಪ್ರವಾಸೋದ್ಯಮ ಸಂಸ್ಥೆಯ ಅಧ್ಯಕ್ಷ ಸುನೀಲ ದೇಸಾಯಿ ವಹಿಸಿಕೊಂಡಿದ್ದರು. ಮುಂದಿನ ಮೂರು ವರ್ಷದ ಅವಧಿಗಾಗಿ ಹೊಸ ಸಮಿತಿ ರಚನೆ ಮಾಡಲಾಯಿತು. ಈ ಚುನಾವಣಾ ಪ್ರಕ್ರಿಯೆ ಕಾಳಿ ಪ್ರವಾಸೋದ್ಯಮ ಸಂಸ್ಥೆ ಗೌರವಾಧ್ಯಕ್ಷರಾದ ರವಿ ರೇಡ್ಕರ ಅವರ ಮಾರ್ಗದರ್ಶನದಲ್ಲಿ ನಡೆಯಿತು.
    ನೂತನ ಅಧ್ಯಕ್ಷರಾಗಿ ವಿನಯ ದೇಸಾಯಿ, ಕಾರ್ಯದರ್ಶಿಯಾಗಿ ಸುದರ್ಶನ ಹೆಗಡೆ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಒಟ್ಟು 9 ಜನರು ಹೊಸ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ. ನಾಲ್ಕು ಜನರ ಮಾರ್ಗದರ್ಶಕ ಸಮಿತಿ ಆಯ್ಕೆ ಆಗಿದೆ.
    ಈ ಸಂದರ್ಭದಲ್ಲಿ ಕಾಳಿ ಪ್ರವಾಸೋದ್ಯಮ ಸಂಸ್ಥೆಯ ಅಧ್ಯಕ್ಷ ಸುನಿಲ ದೇಸಾಯಿ, ಗೌರವಾಧ್ಯಕ್ಷ ರವಿ ರೇಡ್ಕರ, ಸದಸ್ಯರಾದ ವಿನಯ ದೇಸಾಯಿ, ಸುದರ್ಶನ ಹೆಗಡೆ, ಆರ್.ಎನ್.ಹೆಗಡೆ, ಜಯಾನಂದ ಡೇರೇಕರ ಮುಂತಾದವರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top