Slide
Slide
Slide
previous arrow
next arrow

ಓಸಿ ಬರೆಯುತ್ತಿದ್ದವ ಪೊಲೀಸ್ ವಶಕ್ಕೆ

300x250 AD

ಶಿರಸಿ: ಇಲ್ಲಿಯ ಗಣೇಶ ನಗರದ ಗಣಪತಿ ಪ್ರತಿಷ್ಠಾಪನದ ಕಟ್ಟಡದ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಓಸಿ ಮಟ್ಕಾ ನಡೆಸುತ್ತಿದ್ದವನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಿಪಿಐ ರಾಮಚಂದ್ರ ನಾಯಕ ನೇತೃತ್ವದಲ್ಲಿ ನಡೆಸಲಾಗಿದ್ದ ಈ ದಾಳಿಯಲ್ಲಿ ಶ್ರೀಕಾಂತ್ ದೇವಾಡಿಗ ಎನ್ನುವವನನ್ನು ವಶಕ್ಕೆ ಪಡೆಯಲಾಗಿದೆ . ಓಸಿ ಜುಗರಾಟದ ಸಲಕರಣೆಗಳೊಂದಿಗೆ ನಗದು ಹಣ 750 ರೂ.ವನ್ನೂ ಜಪ್ತಿಪಡಿಸಿಕೊಳ್ಳಲಾಗಿದೆ.
ಓಸಿ ಮಟ್ಕಾದಿಂದ ಸಂಗ್ರಹವಾದ ಹಣವನ್ನು ಬುಕ್ಕಿ ಗಣೇಶ ನಗರದ ರಾಜು ನಾಯ್ಕ ಎನ್ನುವವನಿಗೆ ಕೊಡುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಈ ಬಗ್ಗೆ ನಗರ ಠಾಣೆಯಲ್ಲಿ ಕಲಂ-78(3) ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top