• Slide
    Slide
    Slide
    previous arrow
    next arrow
  • ಹಾಲು ಉತ್ಪಾದಕರಿಂದ ಖರೀದಿ ದರ ಏರಿಕೆಗೆ ತಡೆ: ನ.20ರ ನಂತರ ತೀರ್ಮಾನ

    300x250 AD

    ಶಿರಸಿ: ರಾಜ್ಯಾದ್ಯಂತ ನಂದಿನಿ ಹಾಲಿನ ದರ ಏರಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಡೆ ನೀಡಿದ್ದು, ನ.20ರ ನಂತರ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿರುವ ಹಿನ್ನಲೆಯಲ್ಲಿ ಹಾಲು ಉತ್ಪಾದಕರಿಗೆ ನೀಡಲು ಸಮ್ಮತಿಸಿದ್ದ ಹಾಲಿನ ಹೆಚ್ಚುವರಿ ಖರೀದಿ ದರ 3 ರೂಪಾಯಿ ತಡೆಹಿಡಿದಿದ್ದು, ನ.20 ರ ನಂತರ ಚರ್ಚಿಸಿ ನೂತನ ದರ ಅನುಷ್ಠಾನಕ್ಕೆ ತರಲಾಗುವುದು ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ತಿಳಿಸಿದ್ದಾರೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಹೈನುಗಾರರ ಪರವಾಗಿ ನಿರ್ಣಯ ಕೈಗೊಳ್ಳುವ ಭರವಸೆಯಿದೆ. ಆ ನಿಟ್ಟಿನಲ್ಲಿ ಹಾಲು ಒಕ್ಕೂಟವೂ ಸಹ ಪ್ರಯತ್ನ ನಡೆಸಲಿದೆ. ಸರಕಾರದ ಅಂತಿಮ ನಿರ್ಣಯದ ನಂತರ ನೂತನ ದರ ಅನುಷ್ಠಾನಕ್ಕೆ ಬರುವುದು ಎಂದು ಅವರು ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top