Slide
Slide
Slide
previous arrow
next arrow

ಸುಯೋಗಾಶ್ರಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

300x250 AD

ಶಿರಸಿ: ಗ್ರೀನ್ ಕೇರ್ (ರಿ.), ಕರ್ನಾಟಕ ರಾಜ್ಯ ಸರಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.) ಹಾಗೂ ಕರ್ನಾಟಕ ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘ (ರಿ.), ಶಿರಸಿ ಘಟಕ ಇವರ ಸಹಯೋಗದಿಂದ ತಾಲೂಕಿನ ಮುಂಡಿಗೇಸರದಲ್ಲಿರುವ ಸುಯೋಗಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರೀನ್ ಕೇರ್ ಸಂಸ್ಥೆಯ ಅಧ್ಯಕ್ಷ ಡಾ.ಶ್ಯಾಮ್ ಸುಂದರ್. ಎಸ್ ಮತ್ತು ಉದ್ಘಾಟನೆಯನ್ನು ಸುಯೋಗಾಶ್ರಯದ ಲತಿಕಾ ಭಟ್ ಅವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಡಾ.ಮಧುಕರ್ ಪಾಟೀಲ್, ಜಿತೇಂದ್ರ ಕುಮಾರ್ ಆರ್‌. ಎಂ, ಮಹೇಶ್ ಬಿ. ನಾಯ್ಕ್ ಭಾಗವಹಿಸಿದ್ದರು. ಅತಿಥಿಗಳಾಗಿ ಪ್ರವೀಣ್ ಪುಲ್ಕರ್, ಎಸ್. ವಿ. ಭಟ್ ಅಮಿತ್ ಅಮಟೆ, ರಮೇಶ್ ಬಿ. ನಾಯ್ಕ್, ಮತ್ತು ಗ್ರೀನ್ ಕೇರ್ ಸಂಸ್ಥೆಯ ಗಜಾನನ ಭಟ್ ಹಾಗೂ ಪ್ರಶಾಂತ್ ಮುಳೆ ಉಪಸ್ಥಿತರಿದ್ದರು.

300x250 AD

ಕಾರ್ಯಕ್ರಮದಲ್ಲಿ ಆಶ್ರಮದ ಎಲ್ಲಾ ಶಿಬಿರಾರ್ಥಿಗಳ ರಕ್ತದೊತ್ತಡ ಮತ್ತು ಮಧುಮೇಹ ಪರೀಕ್ಷೆಗಳನ್ನು ನಡೆಸಿ ಸೂಕ್ತ ಔಷಧಿಗಳನ್ನು ಕೊಡಲಾಯಿತು. ಮಧುಕರ್ ಎಸ್. ಶೆಟ್ಟಿ ಎಲ್ಲರನ್ನು ಸ್ವಾಗತಿಸಿದರು. ರಮೇಶ್ ಬಿ. ನಾಯಕ್ ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದರು. ಗಂಗಾಧರ ಪಮ್ಮಾರ ವಂದನಾರ್ಪಣೆ ಮಾಡಿದರು.

Share This
300x250 AD
300x250 AD
300x250 AD
Back to top