Slide
Slide
Slide
previous arrow
next arrow

ವಾಹನದ ವಾರಸುದಾರರಿಗೆ ಸೂಚನೆ

300x250 AD

ಕಾರವಾರ: ಅರಣ್ಯ ಇಲಾಖೆಯು ಜಿ.ಚಂದ್ರಶೇಖರ, ರಾಜೇಶ್ವರಿ ನಗರ, ರಾಣೆಬೆನ್ನೂರು, ಹಾವೇರಿ ಇವರ ವಾಹನ ಸಂಖ್ಯೆ ಏಂ-27-2400 ವಿರುದ್ದ ಗುನ್ನೆ ದಾಖಲಿಸಿದ್ದು, ಉಪ ಅರಣ್ಯ ಸಂರಕ್ಷಣಾಧಿಕಾರಿ, ಶಿರಸಿ ಇವರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಕರ್ನಾಟಕ ಅರಣ್ಯ ಕಾಯ್ದೆ ಸೆಕ್ಷನ್ 71 ಎ ಮೇರೆಗೆ ವಿಚಾರಣೆಗೆ ಹಾಜರಾಗಲು ನೋಟೀಸನ್ನು ಅಂಚೆ ಮೂಲಕ ಅನೇಕ ಬಾರಿ ರವಾನಿಸಿದರೂ ಈವರೆಗೂ ಯಾರೂ ಹಾಜರಾಗದೇ ಇರುವ ಕಾರಣ ಇಲಾಖೆಯು ವಶಪಡಿಸಿಕೊಂಡಿರುವ ವಾಹನದ ವಿಚಾರಣೆಗೆ ಹಾಜರಾಗುವಂತಹ ಯಾರಾದರೂ ಕಾನೂನುಬದ್ಧ ವಾರಸುದಾರರಿದ್ದಲ್ಲಿ ಅಧಿಕೃತ ದಾಖಲೆಗಳೊಂದಿಗೆ ಹಾಗೂ ನ್ಯಾಯಾಲಯದ ಪ್ರಮಾಣ ಪತ್ರದೊಂದಿಗೆ ತಮ್ಮ ವಕೀಲರ ಮೂಲಕ ಈ ಮೊಕದ್ದಮೆಗೆ ಹಾಜರಾಗಲು ತಿಳಿಯಪಡಿಸಿದೆ. ಈ ಪ್ರಕಟಣೆ ಹೊರಡಿಸಿದ 30 ದಿನಗಳ ಒಳಗೆ ಕಾನೂನುಬದ್ಧ ವಾರಸುದಾರರು ಯಾರೂ ಇಲ್ಲದಿದ್ದಲ್ಲಿ ವಿಲೆಗೊಳಿಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top