Slide
Slide
Slide
previous arrow
next arrow

ಜಿಲ್ಲೆಯ ಜನಮನ ಗೆದ್ದ ಡಾ.ಸುಮನ್ ಪೆನ್ನೇಕರ್’ರಿಂದ ಭಾವನಾತ್ಮಕ ಟ್ವೀಟ್

300x250 AD

ಕಾರವಾರ: ವರ್ಗಾವಣೆಗೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಭಾವನಾತ್ಮಕವಾಗಿ ಟ್ವೀಟ್ ಮಾಡಿ ಉತ್ತರ ಕನ್ನಡಿಗರ ಮನ ಗೆದ್ದಿದ್ದಾರೆ.

ಉತ್ತರ ಕನ್ನಡದಿಂದ ಮೂರು ದಿನಗಳ ಹಿಂದಷ್ಟೇ ಡಾ.ಸುಮನ ಪೆನ್ನೇಕರ್ ಅವರನ್ನು ಬೆಂಗಳೂರಿನ ಸಿಐಡಿ ವಿಭಾಗಕ್ಕೆ ವರ್ಗಾಯಿಸಿ ಸರ್ಕಾರ ಆದೇಶಿಸಿತ್ತು. ಶನಿವಾರ ಅವರ ಚಲನಾದೇಶ (ಜಿಲ್ಲಾ ಕರ್ತವ್ಯದಿಂದ ಬಿಡುಗಡೆ) ಬಂದಿದ್ದು, ಆದೇಶದನ್ವಯ ತಾವು ನಿರ್ಗಮಿಸುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ. ಟ್ವೀಟ್‌ನಲ್ಲಿ ‘ಅತ್ತ ಹಸಿರ ಬೆಟ್ಟದ ಸಾಲು, ಇತ್ತ ಸ್ವಚ್ಛಂದದ ಕಡಲು. ಇಂತಹ ಸೊಬಗಿನ ನೆಲದಷ್ಟೇ ಶ್ರೀಮಂತವಾದ ಜನರ ಮನಸ್ಸು, ನೀಡಿದ ಪ್ರೀತಿ, ಈ ನೆನಪು ಸದಾ ಹಸಿರಾಗೇ ಇರುತ್ತೆ ಘಟ್ಟದ ಕಾಡುಗಳ ಹಾಗೆ!’ ಎಂದು ಬರೆದುಕೊಂಡಿದ್ದಾರೆ.

300x250 AD

ವರ್ಗಾವಣೆ ಆದೇಶ ಬಂದ ದಿನವೇ ಎಸ್‌ಪಿಯವರ ಟ್ವಿಟರ್ ಖಾತೆಯಿಂದ ಈ ಪೋಸ್ಟ್ ಪ್ರಕಟಗೊಂಡಿತ್ತು. ಆದರೆ ಬಳಿಕ ಅದನ್ನು ಅಳಿಸಲಾಗಿತ್ತು. ಅಷ್ಟರೊಳಗೆ ಹಳೆಯ ಪೋಸ್ಟ್ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದಲೂ ಭಾರೀ ವೈರಲ್ ಆಗಿತ್ತು.

Share This
300x250 AD
300x250 AD
300x250 AD
Back to top