Slide
Slide
Slide
previous arrow
next arrow

ಪಟೇಲ್ ನಗರದಲ್ಲಿ ಕ್ರಿಶ್ಚಿಯನ್ ಸಿಮಿಟ್ರಿ ಸಭಾಭವನ ಉದ್ಘಾಟನೆ

300x250 AD

ದಾಂಡೇಲಿ : ನಗರದ ಪಟೇಲ್ ನಗರದಲ್ಲಿರುವ ಕ್ರೈಸ್ತ ಸಮಾಜದ ಸಮಾದಿ ಭೂಮಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಕ್ರಿಶ್ಚಿಯನ್ ಸಿಮಿಟ್ರಿ ಸಭಾಭವನವನ್ನು ಉದ್ಘಾಟಿಸಲಾಯ್ತು.

ನೂತನ ಸಭಾಭವನವನ್ನು ಚರ್ಚಿನ ಧರ್ಮಗುರುಗಳು ಕ್ರಿಶ್ಚಿಯನ್ ಸಿಮಿಟ್ರಿ ವೆಲ್ಫರ್ ಅಸೋಸಿಯೇಶನ್ ಅಧ್ಯಕ್ಷರಾದ ಫಾ: ಸ್ಟಿಪಂಜಾ ಅವರು ಉದ್ಘಾಟಿಸಿ ಮಾತನಾಡುತ್ತಾ ನಗರ ಸಭೆಯವರು ನಮ್ಮ ಸಮಾಜ ಬಾಂದವರ ಬಹುವರ್ಷಗಳ ಬೇಡಿಕೆಯಾದ ಸಭಾಭವನವನ್ನು ನಿರ್ಮಿಸಿಕೊಡುವುದರ ಮೂಲಕ ಬೇಡಿಕೆಯನ್ನು ಈಡೇರಿಸಿಕೊಟ್ಟಿವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಕರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸರಸ್ವತಿ ರಜಪೂತ್ ಅವರು ಇಲ್ಲಿ ಸಮುದಾಯ ಭವನವನ್ನು ನಿರ್ಮಿಸಿಕೊಡಬೇಕೆಂಬ ಮನವಿ ಬಹಳ ವರ್ಷಗಳಿಂದ ಇತ್ತು. ಮನವಿಗೆ ನಗರ ಸಭೆಯಿಂದ ಸ್ಪಂದಿಸಲಾಗಿದೆ. ಪರಿಣಾಮವಾಗಿ ಇಂದು ಕಾಲ ಕೂಡಿ ಬಂದು ಸಭಾಭವನದ ಉದ್ಘಾಟನೆ ನೆರವೇರಿದೆ ಎಂದರು.

300x250 AD

ಮುಖ್ಯ ಅತಿಥಿಗಳಾಗಿ ಫಾ: ರೆವರೆಂಡ್ ಶಾಂತರಾಜ ಕುರಿ, ಫಾ.ಪ್ರಭಾಕರ ತಲಪಾಟಿ, ಫಾ. ರೆವರೆಂಡ್ ಸುಭಾಸ್ಕರ್ ರಾವ್, ನಗರ ಸಭಾ ಸದಸ್ಯರುಗಳಾದ ಆಸೀಪ್ ಮುಜಾವರ್, ವೆಂಕಟ್ರಮಣಮ್ಮ ಮೈಥುಕುರಿ ಮೊದಲಾದವರು ಉಪಸ್ಥಿತರಿದ್ದರು.

ಫಾ. ಪ್ರಭಾಕರ ತಲಪಾಟಿಯವರು ಸ್ವಾಗತಿಸಿದ ಕರ‍್ಯಕ್ರಮಕ್ಕೆ ಮ್ಯಾಥ್ಯೂಸ್ ಕೊಂಡಿಟ್ಟಿ ವಂದಿಸಿದರು. ಡೇವಿಡ್ ದಾನಂ ಅವರು ಕರ‍್ಯಕ್ರಮ ನಿರೂಪಿಸಿದರು.

Share This
300x250 AD
300x250 AD
300x250 AD
Back to top