• Slide
    Slide
    Slide
    previous arrow
    next arrow
  • ಸಚಿವರೆದುರು ಕೈಮುಗಿದು ಕ್ಷಮೆ ಯಾಚನೆ ಮಾಡಿದ ಪೊಲೀಸ್ ಸಿಬ್ಬಂದಿ

    300x250 AD

    ಮುಂಡಗೋಡ: ಪೆಟ್ರೋಲ್ ಬಂಕ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಎನ್ನಲಾಗಿದ್ದ ಪೊಲೀಸ್ ಸಿಬ್ಬಂದಿ ಮಾದೇವ ಅವರು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಬಳಿ ಕೈಮುಗಿದು ಕ್ಷಮೆ ಯಾಚನೆ ಮಾಡಿದ್ದಾರೆ.

    ಬೆಂಡಿಗೇರಿ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವನಿಗೆ ಮಾದೇವ ಥಳಿಸಿದ್ದ ಎಂಬ ಆರೋಪ ಕೇಳಿಬಂದಿತ್ತು. ಅಷ್ಟೇ ಅಲ್ಲದೇ, ಸಚಿವ ಹೆಬ್ಬಾರ್ ಪ್ರವಾಸಿ ಮಂದಿರಕ್ಕೆ ಬಂದಿದ್ದ ವೇಳೆ ಭೋವಿ ಸಮಾಜದವರು ಭೇಟಿಯಾಗಿ, ಪೊಲೀಸ್ ಸಿಬ್ಬಂದಿಯೋರ್ವ ಜನಸಾಮಾನ್ಯರಿಗೆ ತೊಂದರೆ ನೀಡುತ್ತಿದ್ದಾರೆ. ನಮ್ಮ ಭೋವಿ ಸಮಾಜದ ಯುವಕನ ಮೇಲೆ ಬೆಲ್ಟ್ಗಳಿಂದ ಹೊಡೆದು ಮೈ ಮೇಲೆ ಗಾಯಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

    300x250 AD

    ಈ ವೇಳೆ ಸಿಬ್ಬಂದಿ ಮಾದೇವ ಸಚಿವರ ಬಳಿ ಕ್ಷಮೆ ಕೇಳಲು ಬಂದಿದ್ದು, ಹೆಬ್ಬಾರ್ ಸಿಬ್ಬಂದಿಗೆ ಕ್ಲಾಸ್ ಕೈಗೊಂಡಿದ್ದಾರೆ. ನಿನ್ನ ಮೇಲೆ ಎರಡು- ಮೂರು ಕೇಸ್‌ಗಳು ನನ್ನ ಬಳಿ ಬಂದಿವೆ. ತಮ್ಮ ಕೆಲಸ ಅಮಾಯಕರ ಮೇಲೆ ದೌರ್ಜನ್ಯ ಮಾಡುವುದೇ? ಎಂದು ಗದರಿಸಿ, ಬುದ್ಧಿಮಾತು ಹೇಳಿ ಕಳುಹಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top