• Slide
    Slide
    Slide
    previous arrow
    next arrow
  • ಸಂಭ್ರಮದಿಂದ ನಡೆದ ದೀಪಾವಳಿ ಹಬ್ಬದ ಆಚರಣೆ

    300x250 AD

    ಸಿದ್ದಾಪುರ: ಪಟ್ಟಣ ವ್ಯಾಪ್ತಿಯ ಹೊಸೂರಿನ ಗುಡ್ಡೇಕೇರಿಯಲ್ಲಿ ಬೂರೇ ನೀರು ತುಂಬುವ ನರಕ ಚತುರ್ದಶಿಯ ಆಚರಣೆ ಸಂಭ್ರಮದಿಂದ ನಡೆಯಿತು.
    ಗುಡ್ಡೆಕೇರಿಯ ಯುವಕರು ಹಿಂದಿನ ದಿನ ರಾತ್ರಿಯೇ ಮುಖ್ಯದ್ವಾರವನ್ನು ತಳಿರು ತೋರಣಗಳಿಂದ ಸಿಂಗರಿಸಿ ನೀರಿನ ಬಾವಿಯ ಸುತ್ತಲ ಪ್ರದೇಶವನ್ನು ಸ್ವಚ್ಛಗೊಳಿಸಿದರು. ನರಕ ಚತುರ್ದಶಿಯಂದು ನಸುಕಿನಲ್ಲಿಯೇ ಮಹಿಳೆಯರು ಸಂಪ್ರದಾಯದಂತೆ ಬೂರೆ ನೀರನ್ನು ತುಂಬುವ ಮೂಲಕ ಬಲಿಂದ್ರನನ್ನು ಬರಮಾಡಿಕೊಂಡರು. ಹಿಂದಿನ ಎರಡು ವರ್ಷಗಳ ಕಾಲ ಕೊರೋನಾ ವೈರಸ್ ಕಾರಣದಿಂದ ಕಳೆಗುಂದಿದ್ದ ದೀಪಾವಳಿ ಹಬ್ಬದ ಆಚರಣೆ, ಈ ವರ್ಷ ಸಂಭ್ರಮದಿಂದ ಆಚರಿಸಲ್ಪಡುತ್ತಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top