• Slide
    Slide
    Slide
    previous arrow
    next arrow
  • ರಾಜ್ಯ ಧನಗರ ಗೌಳಿ ಸಮಿತಿಯ ನೂತನ ರಾಜ್ಯಾಧ್ಯಕ್ಷರಾಗಿ ದೇವು ಪಾಟೀಲ್ ಆಯ್ಕೆ

    300x250 AD

    ಮುಂಡಗೋಡ: ಕರ್ನಾಟಕ ರಾಜ್ಯ ಧನಗರ ಗೌಳಿ ಸಮಿತಿಯ ನೂತನ ರಾಜ್ಯಾಧ್ಯಕ್ಷರಾಗಿ ಮುಂಡಗೋಡ ಎ.ಪಿ.ಎಮ್.ಸಿ ಯ ಮಾಜಿ ಅಧ್ಯಕ್ಷ ದೇವು ಜಾನು ಪಾಟೀಲ್ ಆಯ್ಕೆಯಾಗಿದ್ದಾರೆ.
    ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾರ್ಮಿಕ ಖಾತೆ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಂ ಹೆಬ್ಬಾರ್, ಧನಗರ ಗೌಳಿ ಸಮುದಾಯದ ಶೈಕ್ಷಣಿಕ, ರಾಜಕೀಯ ಹಾಗೂ ಸಾಮಾಜಿಕ ಪ್ರಗತಿಗಾಗಿ ಹಲವಾರು ದಶಕಗಳ ಕಾಲ ಹೋರಾಟ ನಡೆಸಿ ಹಿಂದುಳಿದ ಸಮುದಾಯವನ್ನು ಸಂಘಟಿಸಿ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಪ್ರಾಮಾಣಿಕ ಹಾಗೂ ಸರಳ, ಸಜ್ಜನ ವ್ಯಕ್ತಿತ್ವದ ದೇವು ಪಾಟೀಲ್ ಅವರಿಗೆ ಇಂದು ಸೂಕ್ತ ಸ್ಥಾನಮಾನ ಲಭಿಸಿದೆ ಎಂದರು.

    ಅತ್ಯಂತ ವೈಶಿಷ್ಟ್ಯ ಆಚರಣೆ ಹಾಗೂ ಸಂಪ್ರದಾಯವನ್ನು ಹೊಂದಿರುವ ಹಿಂದುಳಿದ ಧನಗರ ಗೌಳಿ ಸಮುದಾಯದ ಸಂಘಟನೆಯು ದೇವು ಪಾಟೀಲ್ ಅಧ್ಯಕ್ಷತೆಯ ಅವಧಿಯಲ್ಲಿ ಮತ್ತಷ್ಟು ಸದೃಢಗೊಂಡು ಸಮುದಾಯವು ಎಲ್ಲಾ ರಂಗದಲ್ಲಿಯೂ ಸಹ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top