• Slide
    Slide
    Slide
    previous arrow
    next arrow
  • ಲಯನ್ಸ್’ನಿಂದ ವಿಶೇಷ ಮಕ್ಕಳಿಗೆ ಭಜನಾ ಕಾರ್ಯಕ್ರಮ

    300x250 AD

    ಶಿರಸಿ: ಮರಾಠಿಕೊಪ್ಪದಲ್ಲಿರುವ ಅಜಿತ ಮನೋಚೇತನಾ ವಿಕಾಸ ವಿಶೇಷ ಮಕ್ಕಳ ಶಾಲೆಯಲ್ಲಿ ಮಕ್ಕಳಿಗಾಗಿ ವಿಶೇಷ ಭಜನಾ ಕಾರ್ಯವನ್ನು ಆಯೋಜಿಸಲಾಗಿತ್ತು. ಶ್ರೀ ಸತ್ಯ ಸಾಯಿ ಭಜನಾ ಮಂಡಳಿಯವರು ಒಂದು ಘಂಟೆ ಕಾಲ ಭಜನೆಯನ್ನು ಮಾಡಿದರು. ಲಯನ್ಸ್ ಸಹೋದರಿಯರು ಮಕ್ಕಳೊಂದಿಗೆ ಬೆರೆತು ಅವರಿಗೆ ಪ್ರಿಯವಾದ ಭಜನೆಯನ್ನು ಮಾಡಿದರು. ಮಕ್ಕಳು ಭಗವದ್ಗೀತೆಯೊಂದಿಗೆ ಭಜನೆಯನ್ನು ಮಾಡಿದರು. ಮಕ್ಕಳಿಗೆ ಹಣ್ಣನ್ನು ವಿತರಿಸಲಾಯಿತು.
    ಲಯನ್ ವರ್ಷಾ ಪಟವರ್ಧನ್‌ರವರು ಶಾಲೆಗೆ ಮತ್ತು ಭಜನಾ ಮಂಡಳಿಗೆ ತಲಾ ರೂ. 5,000/- ದೇಣಿಗೆ ನೀಡಿದರು. ಶಾಲೆಯ ಮುಖ್ಯಾಧ್ಯಾಪಕರಾದ ಶ್ರೀಮತಿ ನರ್ಮದಾ ಹೆಗಡೆ ಮತ್ತು ಶಿಕ್ಷಕರು ಹಾಗೂ ಲಯನ್ಸ್ ಸಹೋದರಿಯರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top