Slide
Slide
Slide
previous arrow
next arrow

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ ಗೋಕರ್ಣ ಪೊಲೀಸರು

300x250 AD

ಗೋಕರ್ಣ: ಖಚಿತ ಮಾಹಿತಿಯ ಮೇರೆಗೆ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದವರ ಮೇಲೆ ದಾಳಿ ನಡೆಸಿದ ಪೊಲೀಸರು, ಈರ್ವರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.
ಕುಮಟಾದ ಬಿಜ್ಜೂರಿನ ಉಮೇಶ ಗೌಡ ಹಾಗೂ ಬೇಲೆಹಿತ್ತಲಿನ ತುಳಸು ಗೌಡ ಬಂಧಿತರು. ಬೇಲೆಹಿತ್ತಲ ಗ್ರಾಮದ ಮೇನ್ ಬೀಚ್ ರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ದಾಳಿ ಮಾಡಲಾಗಿತ್ತು. ಆರೋಪಿತರಿಂದ 10,000 ಮೌಲ್ಯದ 502 ಗ್ರಾಂ ಗಾಂಜಾ ಜಪ್ತು ಮಾಡಲಾಗಿದ್ದು, ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ಶ್ರೀ ರವೀಂದ್ರ ಬಿರಾದಾರ, ಪಿ.ಎಸ್.ಐ ಸುಧಾ ಅಘನಾಶಿನಿ, ಪ್ರೊ. ಪಿ.ಎಸ್.ಐ ಕೋಕಿಲಾ, ಎ.ಎಸ್.ಐ ಅರವಿಂದ್ ಶೆಟ್ಟಿ ಹಾಗೂ ಪೊಲೀಸ್ ಸಿಬ್ಬಂದಿಯವರಾದ ನಾಗರಾಜ ಪಟಗಾರ, ವಸಂತ್ ನಾಯ್ಕ, ನಾಗರಾಜ ನಾಯ್ಕ, ರಾಜೇಶ ಹೆಚ್ ನಾಯ್ಕ, ಸಚಿನ್ ನಾಯ್ಕ, ಜಿ.ಬಿ ರಾಣೆ, ಮಂಜುನಾಥ ಉಪ್ಪಾರ, ಅರುಣ್ ಮುಕ್ಕಣ್ಣವರ, ರಾಮಯ್ಯ ನಾಯ್ಕ, ಗಣೇಶ ದಾಸರ ರವರು ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top