Slide
Slide
Slide
previous arrow
next arrow

ಸಿಗಂದೂರು ದೇವಸ್ಥಾನದ ಪೂಜೆ ಹಕ್ಕು ಪ್ರಧಾನ ಅರ್ಚಕರಿಗೆ: ಕೋರ್ಟ್ ಆದೇಶ

300x250 AD

ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಪೂಜೆಯ ಹಕ್ಕು ಕುರಿತಂತೆ ಇಲ್ಲಿನ ಸಿವಿಲ್ ನ್ಯಾಯಾಲಯ ಮಹತ್ವದ ಮಧ್ಯಂತರ ಆದೇಶ ಹೊರಡಿಸಿದೆ.
ಪೂಜೆಯ ಹಕ್ಕು ಪ್ರಧಾನ ಅರ್ಚಕ ಶೇಷಗಿರಿ ಭಟ್ ಅವರಿಗೆ ಇದ್ದು, ಹೀಗಾಗಿ ಪೂಜೆ ವಿಷಯಕ್ಕೆ ಸಂಬಂಧಿಸಿದಂತೆ ಅವರಿಗೆ ಯಾವುದೇ ಅಡ್ಡಿ ಆತಂಕ ಉಂಟುಮಾಡಬಾರದು ಎಂದು ನ್ಯಾಯಾಧೀಶರಾದ ಶ್ರೀಶೈಲ ಭೀಮಸೇನ ಬಗಾಡಿ ಆದೇಶಿಸಿದ್ದಾರೆ.
ಪೂಜೆ ಹಕ್ಕಿಗೆ ಸಂಬಂಧಿಸಿದಂತೆ ದೇವಸ್ಥಾನದ ಧರ್ಮದರ್ಶಿ ರಾಮಪ್ಪ ಅವರ ವಿರುದ್ಧ ಸೆ. 20ರಂದು ದೇವಾಲಯದ ಪ್ರಧಾನ ಅರ್ಚಕ ಶೇಷಗಿರಿ ಭಟ್ ದಾವೆ ದಾಖಲಿಸಿದ್ದು, ಈ ಕುರಿತ ಮಧ್ಯಂತರ ಆದೇಶ ಹೊರಬಿದ್ದಿದೆ. ದಾವೆ ಪೂರ್ಣಗೊಳ್ಳುವವರೆಗೂ ಪೂಜೆ ವಿಷಯದಲ್ಲಿ ಅರ್ಚಕರಿಗೆ ಯಾವುದೇ ಅಡ್ಡಿ ಮಾಡಬಾರದೆಂದು ತಿಳಿಸಲಾಗಿದೆ.

300x250 AD
Share This
300x250 AD
300x250 AD
300x250 AD
Back to top