ಶಿರಸಿ: ಇತ್ತೀಚೆಗೆ ದಾಖಲಾದ ಕಳ್ಳತನದ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಹಿಡಿಯುವಲ್ಲಿ ಬನವಾಸಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೋಲೀಸರ ಚುರುಕಿನ ಕಾರ್ಯಾಚರಣೆಯಲ್ಲಿ ಮಹಮ್ಮದ್ ಕೈಫ್, ವಿಶ್ವ ಪಾವಸ್ಕರ್,ಯಾಸೀನ್,ರಿಯಾಜ್ ಎಂಬುವವರನ್ನು ಬಂಧಿಸಿದ್ದು, ಕಳುವಾದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಅಧೀಕ್ಷಕಿ ಸುಮನ್ ಪೆನ್ನೇಕರ್,ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್,ರವಿ ನಾಯ್ಕ್, ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಬನವಾಸಿ ಪಿಎಸ್ಐ ಹನುಮಂತ್ ಬಿರಾದಾರ್, ಚಂದ್ರಕಲಾ ಪತ್ತಾರ್, ಚಂದ್ರಪ್ಪ ಕೋರವರ್, ಸಂತೋಷ್, ಪ್ರಸಾದ್ ಮಡಿವಾಳ್, ಬಸವರಾಜ್ ಜಾಡರ್ಇನ್ನಿತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಕಳ್ಳತನ ಪ್ರಕರಣದ ಆರೋಪಿಗಳು ಪೋಲೀಸರ ವಶಕ್ಕೆ
