Slide
Slide
Slide
previous arrow
next arrow

ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

300x250 AD

ಕಾರವಾರ: ಯಾವುದೇ ಪರ್ಮಿಟ್ ಇಲ್ಲದೇ ಗೋವಾದಿಂದ ಸಾರಾಯಿ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ ಘಟನೆ ತಾಲೂಕಿನ ಐಸ್ ಪ್ಯಾಕ್ಟರಿ ಚೆಂಡಿಯಾದಲ್ಲಿ ನಡೆದಿದೆ.
ನಾಗರಾಜ್ ದೇವಿದಾಸ ತಳೇಕರ್ ಬಂಧಿತ ವ್ಯಕ್ತಿಯಾಗಿದ್ದು ಬಂಧಿತನಿಂದ ಸುಮಾರು 49.792 ರೂಪಾಯಿ ಮೌಲ್ಯದ ಗೋವಾ ಸಾರಾಯಿಯನ್ನ ವಶಕ್ಕೆ ಪಡೆಯಲಾಗಿದೆ. ಗೋವಾದಿಂದ ಸಾರಾಯಿ ತಂದು ಐಸ್ ಫ್ಯಾಕ್ಟರಿ ಚೆಂಡಿಯಾ ಬಳಿಯ ಬಳಿಯ ಸುಬ್ರಹ್ಮಣ್ಯ ನಗರ ರಸ್ತೆಯಲ್ಲಿನ ಬಂಧಿತ ನಾಗರಾಜ್ ಮನೆಯ ಸಮೀಪ ಮಾರಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದು, ಇನ್ನೋರ್ವ ಆರೋಪಿ ಸ್ಥಳೀಯ ಪಂಚಾಯತ್ ಸದಸ್ಯ ರಾಜೇಶ್ ನಾಯ್ಕ ಎನ್ನುವಾತ ಪರಾರಿಯಾಗಿದ್ದಾನೆ.
ಕಾರವಾರ ಗ್ರಾಮೀಣ ಪೊಲೀಸ್ ಠಾಣೆ ಇನ್ಸಪೆಕ್ಟರ್ ಸೀತಾರಾಮ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡು ಪರಾರಿಯಾದ ಆರೋಪಿ ಬಂಧನಕ್ಕೆ ಜಾಡು ಬೀಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top