Slide
Slide
Slide
previous arrow
next arrow

ಸೇಬು ತುಂಬಿದ ಲಾರಿ ಪಲ್ಟಿ: ಹಣ್ಣಿಗಾಗಿ ಮುಗಿಬಿದ್ದ ಜನ

300x250 AD

ಯಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿದ ಸೇಬುಹಣ್ಣು ಸಾಗಿಸುತ್ತಿದ್ದ ಲಾರಿಯೊಂದು 63ರ ರಾಷ್ಟ್ರೀಯ ಹೆದ್ದಾರಿ ಆರತಿಬೈಲ್ ಘಟ್ಟದ ಸೇತುವೆಯ ಮಧ್ಯದಲ್ಲಿ ಪಲ್ಟಿಯಾದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ದೆಹಲಿಯಿಂದ ಕೇರಳಕ್ಕೆ ಸೇಬುಹಣ್ಣು ಸಾಗಾಟ ಮಾಡುತ್ತಿದ್ದ ಚಾಲಕ ಲಾರಿ ಆರತಿಬೈಲ್ ಘಟ್ಟದ ತಿರುವಿನಲ್ಲಿ ಲಾರಿಯ ಮೇಲೆ ನಿಯಂತ್ರಣ ಸಾಧಿಸಲಾಗದೆ, ಸೇತುವೆಯ ಮೇಲೆ ಉರುಳಿಸಿದ್ದಾನೆ. ಅಪಘಾತದಲ್ಲಿ ಲಾರಿಯ ಅರ್ಧ ಭಾಗ ಜಖಂ ಆಗಿದ್ದು, ಲಾರಿಯ ಚಾಲಕ ಹಾಗೂ ಕ್ಲೀನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

300x250 AD

ಅವಘಡದಲ್ಲಿ ಲಾರಿಯಲ್ಲಿದ್ದ ಸೇಬು ಹಣ್ಣುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಜನತೆ ಹಣ್ಣು ತೆಗೆದುಕೊಳ್ಳಲು ಮುಗಿಬಿದ್ದರು. ಯಲ್ಲಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತಾಗಿ ದೂರು ದಾಖಲಾಗಿದೆ.

Share This
300x250 AD
300x250 AD
300x250 AD
Back to top