• Slide
    Slide
    Slide
    previous arrow
    next arrow
  • ಸ್ವರ್ಣವಲ್ಲಿಯಲ್ಲಿ ಶರನ್ನವರಾತ್ರಿ: ವಿವಿಧ ಕಾರ್ಯಕ್ರಮಗಳ ಮಾಹಿತಿ ಇಲ್ಲಿದೆ

    300x250 AD

    ಶಿರಸಿ : ತಾಲೂಕಿನ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಸೆ.26 ರಿಂದ ಅ.5 ರವರೆಗೆ ಶರನ್ನವರಾತ್ರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ವೇಳೆ ವಿವಿಧ ಧಾರ್ಮಿಕ ಕಾರ್ಯಕ್ರಗಳು ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯಲಿದೆ. ಈ ಕುರಿತು ಸೋಮವಾರ ಸ್ವರ್ಣವಲ್ಲೀ ಮಠದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು  ಮಾಹಿತಿ ನೀಡಿದರು. 

    ಸೆ.26 ರಂದು ಸೋಮವಾರ ಬೆಳಿಗ್ಗೆ 8 ಗಂಟೆಯಿಂದ ಗಣಪತಿ ಪೂಜಾ, ಪುಣ್ಯಾಹ, ಮಹಾಸಂಕಲ್ಪ, ಋತ್ವಿಕ್ ವರಣ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರತಿ ದಿವಸ ಬೆಳಿಗ್ಗೆ ವಿವಿಧ ಧಾರ್ಮಿಯ ಕಾರ್ಯಕ್ರಮ, ಮಧ್ಯಾಹ್ನ ದುರ್ಗಾಪೂಜೆ ಹಾಗೂ ಮಹಾಮಂಗಳಾರತಿ, ಪ್ರತಿ ದಿನ ರಾತ್ರಿ ದುರ್ಗಾ ಮಹಾಪೂಜಾ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ ಎಂದರು. 

    ಸೆ.30 ರಂದು ಲಲಿತಾ ಪಂಚಮೀ, ಸಾಯಂಕಾಲ ಶತರುದ್ರಾಭಿಷೇಕ ಸಹಿತ ಮಹಾಪೂಜಾ, ಮಹಾಮಂಗಳಾರತಿ, ಅ.2 ರಂದು ಬೆಳಿಗ್ಗೆ ಶಾರದಾ ಸ್ಥಾಪನೆ, ಅ.3 ರಂದು ದುರ್ಗಾಷ್ಟಮೀ, ಅ.4 ರಂದು ಮಹಾನವಮೀ, ಲಕ್ಷ್ಮೀ ಪೂಜೆ, ಶ್ರೀ ಕ್ಷೇತ್ರಪಾಲ ಬಲಿ ಮತ್ತು ಅ.5 ರಂದು ವಿಜಯಾದಶಮೀ ನಡೆಯಲಿದೆ ಎಂದ ಶ್ರೀಗಳು,  ವಿಜಯಾದಶಮಿಯಂದು ಸಂಜೆ 4.30 ಗಂಟೆಯಿಂದ ಶ್ರೀ ಲಕ್ಷ್ಮೀನರಸಿಂಹ ದೇವರ ಸೀಮೋಲ್ಲಂಘನ, ಶಮೀಪೂಜಾ, ಅಷ್ಟಾವಧಾನ ಸೇವಾ ನಡೆಯಲಿದೆ. ನಂತರ ಸಾಯಂಕಾಲ 8 ಗಂಟೆಯಿಂದ ಮಹಾಮಂಗಳಾರತಿ, ವಿವಿಧ ಸೇವೆ, ಆಶೀರ್ವಚನ, ಫಲಮಂತ್ರಾಕ್ಷತೆ ಪ್ರದಾನ ನಡೆಯಲಿದೆ ಎಂದು ತಿಳಿಸಿದರು. 

    ಅ.6 ರಂದು ಶ್ರೀ ನವಚಂಡಿ ಹೋಮ ಮತ್ತು ಶ್ರೀ ಲಕ್ಷ್ಮೀ ನರಸಿಂಹ ಮಂತ್ರ ಹವನ ಪೂರ್ಣಾಹುತಿ, ಮಹಾಪ್ರಸಾದ ವಿತರಣೆ ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ಪ್ರತಿದಿವಸ ಸಂಜೆ 6.30ರಿಂದ 8 ಗಂಟೆಯವರೆಗೆ ಸೇವಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಭಕ್ತರು ಪಾಲ್ಗೊಳಬೇಕು ಎಂದು ಶ್ರೀಗಳು‌ ನುಡಿದರು. 

    ನಂತರ ಶಿರಸಿ ಪತ್ರಿಕಾ ವರದಿಗಾರರಾಗಿ ಶ್ರೀಗಳು ಫಲಮಂತ್ರಾಕ್ಷತೆ ವಿತರಸಿದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ, ವ್ಯವಸ್ಥಾಪಕ ಎಸ್.ಎನ್.ಗಾಂವಕರ ಬೆಳ್ಳಿಪಾಲ್, ಶ್ರೀಗಳ ಆಪ್ತ ಕಾರ್ಯದರ್ಶಿ ಸಿಂಧೂರ್ ಭಟ್  ಇದ್ದರು. 

    300x250 AD

     

    ನವರಾತ್ರಿಯಲ್ಲಿ 10 ಸಾವಿರಕ್ಕೂ ಅಧಿಕ ಭಕ್ತರು ಮಠಕ್ಕೆ ಭೇಟಿ ನೀಡುತ್ತಾರೆ. ದಶಮಿಯ ಕಾರ್ಯಕ್ರಮ ಇಲ್ಲಿ ವಿಶೇಷವಾಗಿದೆ. ಆಶೀರ್ವಚನ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ::   ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಸ್ವರ್ಣವಲ್ಲೀ ಮಠ.

    ನದಿ ಜೋಡಣೆ ಸಂಬಂಧಿಸಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಯೋಜನೆ ಮುಂದುವರೆಸುವುದಿಲ್ಲ ಎಂಬ ಭರವಸೆಯಿದೆ. ಈಗ ಮುಂದುವರೆಯುತ್ತಿಲ್ಲ. ಡಿಪಿಆರ್ ರದ್ದು ಮಾಡುವುದು ಯೋಗ್ಯವಾಗಿದೆ. ಅದರ ಬಗ್ಗೆ ಆಗ್ರಹವಿದೆ. ನಮ್ಮ ಆಶಯ ನಮ್ಮ ಜಿಲ್ಲೆಯ ಶಾಸಕರುಗಳು ಸದನದಲ್ಲಿ ಒತ್ತಾಯ ಮಾಡಲಿ. ಈಗ ಅಧಿವೇಶನ ನಡೆಯುತ್ತಿದ್ದು, ಏನು ಮಾಡುತ್ತಾರೆ ಎಂದು ಕಾದುನೋಡಬೇಕಾಗಿದೆ ಎಂದರು.

    Share This
    300x250 AD
    300x250 AD
    300x250 AD
    Leaderboard Ad
    Back to top