• Slide
    Slide
    Slide
    previous arrow
    next arrow
  • ನಗರ ಸಭೆಯಿಂದ ಸಿಸಿಟಿವಿ ಪೂರೈಸುವಂತೆ ಮನವಿ

    300x250 AD

    ಶಿರಸಿ: ಸಾರ್ವಜನಿಕ ಗಣೇಶೋತ್ಸವದ ಸ್ಥಳದಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮೆರಾ ಬಳಸಲು ಪೊಲೀಸ್ ಇಲಾಯಿಂದ ನಿರ್ದೇಶನ ನೀಡಿರುವುದರಿಂದ ದುಬಾರಿ ಮೊತ್ತದ ಸಿಸಿ ಟಿವಿ ಕ್ಯಾಮೆರಾವನ್ನು ನಗರಸಭೆಯಿಂದಲೇ ಪೂರೈಸಿಕೊಡಬೇಕೆಂದು ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ಆಗ್ರಹಿಸಿದ್ದಾರೆ.

    ಸಾರ್ವಜನಿಕ ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ಪಿಎಸ್‌ಐ ರಾಜಕುಮಾರ ಅಧ್ಯಕ್ಷತೆಯಲ್ಲಿ ಗಣೇಶೋತ್ಸವ ಮಂಡಳಿಯೊಂದಿಗೆ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ರಾಜಕುಮಾರವರು, ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಕನಿಷ್ಠ ಎರಡಾದರೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕೆಂದು ಸೂಚನೆ ನೀಡಿದ್ದರು. ಇದರಿಂದ ಕಂಗಲಾದ ಸಣ್ಣ ಸಣ್ಣ ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು, ಮೊದಲೇ ಗಣೇಶೋತ್ಸವಕ್ಕೆ ಮಂಡಳಿಯಲ್ಲಿ ಹಣ ಇಲ್ಲದಿರುವಾಗ ಇನ್ನೆಲ್ಲಿ ಸಿಸಿ ಟಿವಿ ಕ್ಯಾಮೆರಾಕ್ಕೆ ಹಣ ತರುವುದೆಂದು ಇಕ್ಕಟ್ಟಿನ ಸ್ಥಿತಿಯಲ್ಲಿದ್ದರು.

    ನಂತರ ಮಂಡಳಿಯವರು ಸಭೆ ಮುಗಿಸಿದ ಬಳಿಕ ನೇರವಾಗಿ ಸಮಾಜಿಕ ಧುರೀಣ ರಾಜು ಶೆಟ್ಟಿಯವರ ನೇತೃತ್ವದಲ್ಲಿ ನಗರಸಭೆಗೆ ಬಂದು ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಅವರನ್ನು ಭೇಟಿಯಾದರು. ಸಣ್ಣಸಣ್ಣ ಮಂಡಳಿಯವರಿಗೆ ನಗರಸಭೆಯಿಂದಲೇ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ ಪುನಃ ಅದನ್ನು ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಿಕೊಬೇಕೆಂದು ಮನವಿ ಮಾಡಿದರು.

    300x250 AD

    ಈ ಸಂದರ್ಭದಲ್ಲಿ ಅಧ್ಯಕ್ಷರು ಪೋಲಿಸ್ ಇಲಾಖೆಯವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಆದೇಶ ಬಂದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಹಾಗೇನಾದರೂ ಬಂದಿದ್ದೆ ಆದರೆ ನಾನು ನಮ್ಮ ಸದಸ್ಯರ ಜೊತೆಗೆ ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬರುವುದಾಗಿ ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಡಾ.ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಸಾಲೆರ್, ಪೌರಾಯುಕ್ತ ಕೇಶವ ಚೌಗುಲೆ ಮುಂತಾದವರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top