Slide
Slide
Slide
previous arrow
next arrow

ಸಾಮಾಜಿಕ ಸೇವಾ ರತ್ನ ಪ್ರಶಸ್ತಿ ಪಡೆದ ರಘು ನಾಯ್ಕ

300x250 AD

ಶಿರಸಿ: ಕಳೆದ ಎರಡು ದಶಕಗಳಿಂದ ನಿರಂತರ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡ ಯುವ ಮುಂದಾಳು ರಘು ನಾಯ್ಕ ಗುಡ್ನಾಪುರ  ಅವರಿಗೆ ಸಾಮಾಜಿಕ ಸೇವಾ ರತ್ನ  ಪ್ರಶಸ್ತಿಯನ್ನು  ತುಮಕೂರಿನಲ್ಲಿ ಪ್ರದಾನ ಮಾಡಲಾಯಿತು.

 ಬನವಾಸಿ ಸೇವಾ ಸಹಕಾರಿ ಸಂಘದ ನಿರ್ದೇಶಕ, ಗುಡ್ನಾಪುರ ಗ್ರಾಮ ಪಂಚಾಯತ್ ಸದಸ್ಯ ರಘು ನಾಯ್ಕ್ ಅವರಿಗೆ ಅವರ ಸಮಗ್ರ ಚಟುವಟಿಕೆ ಗಮನಿಸಿ

 ಬೆಳಗಾವಿಯ ಜಿಲ್ಲೆಯ ರತ್ನಾ ಬಾಯಿ ಕಲ್ಲಪ್ಪ ಉದಗಟ್ಟಿ ಸಾಮಾಜಿಕ ಪ್ರತಿಷ್ಠಾನ ಹಾಗೂ ಕರ್ನಾಟಕ ಚಾಲಕರ ಒಕ್ಕೂಟ ಇವರ ಆಶ್ರಯದಲ್ಲಿ  ನೀಡಲಾಗುವ ಪ್ರಶಸ್ತಿಯನ್ನು ತುಮಕೂರಿನಲ್ಲಿ  ಹಲವು ರಾಜ್ಯ ನಾಯಕರ ಸಮ್ಮುಖದಲ್ಲಿ ಪ್ರದಾನ ಸೋಮವಾರ ಮಾಡಲಾಯಿತು. 

300x250 AD

ಈ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್ ಅವರಿಗೂ ಈ ಪ್ರಶಸ್ತಿ ನೀಡಲಾಗಿದೆ ಎಂಬುದು ಉಲ್ಲೇಖನೀಯ.

Share This
300x250 AD
300x250 AD
300x250 AD
Back to top